Advertisement

ಹಿರಿಯಡಕ ದೇಗುಲ ಜೀರ್ಣೋದ್ಧಾರ: ಭರದ ಕಾಮಗಾರಿ

12:13 PM Dec 10, 2017 | Team Udayavani |

ಹೆಬ್ರಿ: ಕರಾವಳಿಯ ಪ್ರಸಿದ್ಧ ಆಲಡೆ ಕ್ಷೇತ್ರಗಳಲ್ಲಿ ಒಂದಾಗಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.

Advertisement

ಪ್ರಥಮ ಹಂತದಲ್ಲಿ ಸುಮಾರು 12.8 ಕೋ.ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ದ್ವಿತೀಯ ಹಂತದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಲಿಂಗೇಶ್ವರ ಸನ್ನಿಧಿ, 2.40 ಕೋಟಿ ರೂ. ವೆಚ್ಚದಲ್ಲಿ ವೀರಭದ್ರ ದೇವರ ದೀಪದಳಿ, 1.60 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ, 1 ಕೋಟಿ ರೂ. ವೆಚ್ಚದಲ್ಲಿ ಸ್ವಾಗತ ಮಂಟಪ, ರಾಜಗೋಪುರ ನಿರ್ಮಾಣ ಸೇರಿದಂತೆ 13.20 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ವಿವಿಧ ವಾರ್ಡ್‌ಗಳ ನೂರಾರು ಕಾರ್ಯಕರ್ತರು ನಿರಂತರ ಕರಸೇವೆಯಲ್ಲಿ ತೊಡಗಿದ್ದಾರೆ.

ಧಾರ್ಮಿಕ ಕಾರ್ಯಕ್ರಮ ಡಿ. 3ರಿಂದ ಶತರುದ್ರಾಭಿಷೇಕ, ಪರಿವಾರ ಸಹಿತ ಮಹಾಪೂಜೆ, ಅಘೋರ ಹೋಮ,
ಅನುಜ್ಞಾ ಕಲಶ ಪ್ರಕ್ರಿಯೆ, ಬಾಲಾಲಯ ಪ್ರತಿಷ್ಠೆ ಇತ್ಯಾದಿ ಪೂರ್ಣಗೊಂಡಿದ್ದು, ಡಿ. 12ರಂದು ವಾಸ್ತುಪೂಜಾ ಪ್ರಕ್ರಿಯೆಗಳು ನಡೆಯಲಿವೆ. ಡಿ. 14ರಂದು ಬೆಳಗ್ಗೆ 11.50ಕ್ಕೆ ಶಿಲಾಪೂಜಾ ಪುರಸ್ಸರ ಶಿಲಾನ್ಯಾಸ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next