Advertisement

ದೇವಸ್ಥಾನಕ್ಕೆಂದು ಹೋದ ಕಲ್ಲಾಪು ನಿವಾಸಿ ವಯೋವೃದ್ಧೆ MISSING

02:46 PM Apr 07, 2023 | Team Udayavani |

ಹಳೆಯಂಗಡಿ: ದೇವಸ್ಥಾನಕ್ಕೆಂದು ತೆರಳಿದ್ದ ವಯೋವೃದ್ಧೆಯೋರ್ವರು ಏಕಾಏಕಿ ನಾಪತ್ತೆಯಾಗಿರುವ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ನಾಪತ್ತೆಯಾದ ವಯೋವೃದ್ಧೆಯನ್ನು ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ (85) ಅವರು ಇಲ್ಲಿನ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನಕ್ಕೆಂದು ಮನೆಯಿಂದ ತೆರಳಿದವರು ಮರಳಿ ಹಿಂದುರುಗಿಲ್ಲ ಎಂದು ವೃದ್ಧೆಯ ಮನೆಯವರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸುಮಾರು 4.2 ಅಡಿ ಎತ್ತರ, ಸಾಧಾರಣ ದೇಹದ ಮೈಕಟ್ಟು, ಎಣ್ಣೆ ಕಪ್ಪು ಮೈಬಣ್ಣ, ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದು ತುಳು ಭಾಷೆಯನ್ನು ಬಲ್ಲವರಾಗಿದ್ದು, ಇವರನ್ನು ಪತ್ತೆಯಾದಲ್ಲಿ ಮೂಲ್ಕಿ ಪೊಲೀಸ್ ಠಾಣೆಯನ್ನು (0824-2290533) ಸಂಪರ್ಕಿಸಲು ಕೋರಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next