Advertisement

ಮಗಳಿಗೆ ವರದಕ್ಷಿಣೆ ಹಿಂಸೆ; ಪೊಲೀಸ್‌ ನಿಷ್ಕ್ರಿಯತೆ; ತಂದೆ ಅತ್ಮಹತ್ಯೆ

11:48 AM Apr 17, 2018 | Team Udayavani |

ಮುಜಫ‌ರನಗರ: ತನ್ನ ಮಗಳಿಗೆ ಆಕೆಯ ಅತ್ತ ನೀಡುತ್ತಿದ್ದ ವರದಕ್ಷಿಣೆ ಹಿಂಸೆ ಬಗ್ಗೆ ತಾನು ಎಷ್ಟೇ ದೂರು ನೀಡಿದರೂ ಪೊಲೀಸರು ಎಫ್ಐಆರ್‌ ದಾಖಲಿಸದೆ ನಿಷ್ಕ್ರಿಯತೆ ತೋರಿದ ಕಾರಣಕ್ಕೆ ಹತಾಶರಾದ 60 ವರ್ಷ ಪ್ರಾಯದ ಅಖ್‌ತರ್‌ ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಜಫ‌ರನಗರ ಜಿಲ್ಲೆಯ ಪುರ್ಬಾಲಿಯಾ ಗ್ರಾಮದಲ್ಲಿ  ನಡೆದಿದೆ. 

Advertisement

ಅಖ್‌ತರ್‌ ಅವರು ತಮ್ಮ ಮಗಳನ್ನು 2012ರಲ್ಲಿ ಮೀರ್‌ ಹಸನ್‌ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಂದಿನಿಂದಲೂ ಅತ್ತೆ ಮಾವ ವರದಕ್ಷಿಣೆಗಾಗಿ ಸೊಸೆಯನ್ನು ಹಿಂಸಿಸುತ್ತಿದ್ದರು. ಇದರಿಂದ ಬೇಸತ್ತ ಆಕೆ, ಪತಿಯ ಮನೆಯನ್ನು ತೊರೆದು ಇದೇ ಎಪ್ರಿಲ್‌ 1ರಿಂದ ಹೆತ್ತವರ ಜತೆಗೆ ವಾಸಿಸಿಕೊಂಡಿದ್ದಳು. 

ಮಗಳು ಅನುಭವಿಸುತ್ತಿರುವ ವರದಕ್ಷಿಣೆ ಹಿಂಸೆ ಬಗ್ಗೆ ತಾನು ಎಷ್ಟೇ ದೂರು ಕೊಟ್ಟರೂ ಪೊಲೀಸರು ಎಫ್ಐಆರ್‌ ದಾಖಲಿಸದಿದ್ದುಕ್ಕೆ ಹತಾಶರಾದ ಅಖ್‌ತರ್‌ ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆಯನ್ನು ಅನುಸರಿಸಿ ಅಖ್‌ತರ್‌ ಅವರ ಅಳಿಯ ಸೇರಿದಂತೆ ಒಟ್ಟು ಐವರ ವಿರುದ್ಧ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸರ್ಕಲ್‌ ಪೊಲೀಸ್‌ ಆಫೀಸರ್‌ ರಾಜೀವ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಎಫ್ಐಆರ್‌ ದಾಖಲಿಸದ ಪೊಲೀಸ್‌ ನಿಷ್ಕ್ರಿಯತೆಯ ಬಗ್ಗೆಯೂ ತನಿಖೆಗೆ ಆದೇಶಿಸಲಾಗಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next