Advertisement

ಐತ್ತೂರು: ಕೆಎಫ್‌ಡಿಸಿ ರಬ್ಬರ್‌ ತೋಟಕ್ಕೆ ಬೆಂಕಿ

01:30 AM May 06, 2019 | sudhir |

ಕಡಬ: ಐತ್ತೂರು ಗ್ರಾಮದ ಸುಂಕದಕಟೆಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ)ದ ರಬ್ಬರ್‌ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಾವಿರಾರು ರಬ್ಬರ್‌ ಗಿಡಗಳು ಬೆಂಕಿಗಾಹುತಿಯಾದ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.

Advertisement

ನಿಗಮದ ಅಧಿಕಾರಿಗಳು ಹಾಗೂ ಸಿಬಂದಿ ಸ್ಥಳೀಯರ ನೆರವಿ ನೊಂದಿಗೆ ಬೆಂಕಿ ನಂದಿಸಲು ಶ್ರಮಿಸಿದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ತೋಟದೊಳಗೆಲ್ಲ ವ್ಯಾಪಿಸಿಕೊಂಡಿತು.

ಈ ಹಿಂದೆ ನಿಗಮದ ತೋಟಕ್ಕೆ ಬೆಂಕಿ ಬಿದ್ದಾಗ ಸುಮಾರು 150ಕ್ಕೂ ಹೆಚ್ಚು ಮಂದಿ ಸ್ಥಳೀಯರು ಸೇರಿ ಬೆಂಕಿ ನಂದಿಸಲು ನೆರವಾಗಿದ್ದರು. ಆದರೆ ಬೆಂಕಿ ನಂದಿಸುವ ವೇಳೆ ಜನರು ತೋಟದ ಬೇಲಿಯನ್ನು ಹಾನಿಗೊಳಿಸಿದ್ದಾರೆ ಎಂದು ನಿಗಮದ ಅಧಿಕಾರಿಗಳು ಜನರ ಮೇಲೆ ಆರೋಪ ಹೊರಿಸಿದ್ದರು. ಈ ಕಾರಣದಿಂದಾಗಿ ಈ ಬಾರಿ ಸ್ಥಳೀಯರು ಬೆಂಕಿ ನಂದಿಸಲು ಹೆಚ್ಚಿನ ಮುತುವರ್ಜಿ ತೋರಿಸಲಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next