Advertisement
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದಾದ ಹಿನ್ನೆಲೆಯಲ್ಲಿ ಬಕ್ರೀದ್ ದಿನ ನಮಾಜ್ಗೆಂದು ಹೊರಬರುವ ಜನ ಪ್ರತಿಭಟನೆಯಲ್ಲಿ ತೊಡಗಬಹುದೇ ಎಂಬ ಆತಂಕವಿತ್ತು. ಆದರೆ, ಅಂಥ ಯಾವುದೇ ಸನ್ನಿವೇಶ ನಿರ್ಮಾಣವಾಗಿಲ್ಲ ಎಂದು ಅವರು ಹೇಳಿದ್ದಾರೆ.
Related Articles
Advertisement
ಸಿಹಿ ವಿನಿಮಯಕ್ಕೆ ಪಾಕ್ ನಿರಾಕರಣೆ!: ಪ್ರತಿ ವರ್ಷ ಬಕ್ರೀದ್ನಂದು ಭಾರತದ ಬಿಎಸ್ಎಫ್, ಪಾಕಿಸ್ಥಾನದ ರೇಂಜರ್ಗಳ ನಡುವೆ ಸಿಹಿ ವಿನಿಮಯ ನಡೆಯುತ್ತದೆ. ಆದರೆ, ಈ ಬಾರಿ ಎರಡೂ ದೇಶಗಳ ನಡುವೆ ಬಿಗುವಿನ ವಾತಾವರಣ ಇರುವ ಕಾರಣ, ಸೌಹಾರ್ದದ ಸಂಕೇತವಾದ ಈ ಪ್ರಕ್ರಿಯೆ ನಡೆದಿಲ್ಲ. ಗಡಿಯಲ್ಲಿ ಸಿಹಿ ವಿನಿಮಯ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವಂತೆ ಭಾರತದ ಗಡಿ ಭದ್ರತೆ ಪಡೆಯು ಪಾಕ್ಗೆ ಸಂದೇಶ ಕಳುಹಿಸಿತ್ತಾದರೂ ಪಾಕ್ ರೇಂಜರ್ಗಳು ಇದರಲ್ಲಿ ಭಾಗವಹಿಸಲು ನಿರಾಕರಿಸಿದರು ಎನ್ನಲಾಗಿದೆ.
ನಾಲ್ಕು ಟ್ವಿಟರ್ ಖಾತೆ ರದ್ದುಜಮ್ಮು-ಕಾಶ್ಮೀರದ ಕುರಿತು ವದಂತಿಗಳನ್ನು ಹಬ್ಬುತ್ತಿರುವ, ದೇಶ ವಿರೋಧಿ ಟ್ವೀಟ್ ಮಾಡುತ್ತಿರುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿಯ ಖಾತೆ ಸೇರಿ ದಂತೆ 8 ಟ್ವಿಟರ್ ಖಾತೆಗಳನ್ನು ತೆಗೆದು ಹಾಕುವಂತೆ ಟ್ವಿಟರ್ ಸಂಸ್ಥೆಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ. ಇವರ ಟ್ವೀಟ್ಗಳು ರಾಜ್ಯದಲ್ಲಿ ಶಾಂತಿ ಕದಡು ತ್ತಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪೈಕಿ ನಾಲ್ಕು ಖಾತೆಗಳನ್ನು ಟ್ವಿಟರ್ ಡಿಲೀಟ್ ಮಾಡಿದ್ದು ಸದ್ಯದಲ್ಲೇ ಉಳಿದ 4 ಖಾತೆಗಳನ್ನು ರದ್ದು ಮಾಡುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರವು ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ವಾಗಿರುವ ಕಾರಣಕ್ಕೇ ಕೇಂದ್ರ ಸರಕಾರ ಅಲ್ಲಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದಿದೆ.
ಪಿ. ಚಿದಂಬರಂ, ಕಾಂಗ್ರೆಸ್ ನಾಯಕ ಚಿದಂಬರಂ ಅವರು ಅತ್ಯಂತ ಬೇಜವಾಬ್ದಾರಿಯುತ ಮತ್ತು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಸರಕಾರದ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುತ್ತಿದ್ದಾರೆ.
ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ