Advertisement

ಸಿದ್ಧಲಿಂಗೇಶ್ವರ ಮಠದ ಅಭಿವೃದ್ಧಿಗೆ ಪ್ರಯತ್ನ

12:57 PM Nov 25, 2021 | Team Udayavani |

ಯಾದಗಿರಿ: ಗಡಿ ಭಾಗದ ಭಕ್ತರ ಆಧ್ಯಾತ್ಮಿಕ ತಾಣವಾದ ಸಿದ್ಧಲಿಂಗೇಶ್ವರ ಶ್ರೀಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಲುಬುರಗಿ ಸಂಸದ ಡಾ| ಉಮೇಶ ಜಾದವ್‌ ಭರವಸೆ ನೀಡಿದರು.

Advertisement

ಬೋರಬಂಡಾ ಗ್ರಾಮದ ಗುಡ್ಡದ ತಪ್ಪಲಿನಲ್ಲಿರುವ ಸಿದ್ಧಲಿಂಗೇಶ್ವರ ಭೇಟಿ ನೀಡಿ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಪರಂಪರೆಯ ಮಠ ಮಂದಿರಗಳ ಅಭಿವೃದ್ಧಿಗಾಗಿ ಸೂಕ್ತ ಅನುದಾನ ಒದಗಿಸುವ ಮೂಲಕ ಪ್ರಗತಿಗೆ ಶ್ರಮಿಸಲಾಗುವುದು ಎಂದರು.

ಇದಕ್ಕೂ ಮುನ್ನ ಸಿದ್ಧಲಿಂಗೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಶ್ರೀಮಠದ ಪೀಠಾಧಿಪತಿಗಳು ಆಗಿರುವ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪಂಚಮ ಸಿದ್ದಲಿಂಗ ಸ್ವಾಮಿಗಳು ಈ ಸ್ಥಳದ ವೈಶಿಷ್ಟ್ಯತೆ ಕುರಿತು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next