Advertisement

ಕಿಡ್ನಾಪ್ ಪ್ರಕರಣ; ಎರಡು ಕನಸು ಸಿನಿಮಾದ ನಿರ್ದೇಶಕ ಮದನ್ ಬಂಧನ

01:26 PM May 27, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಬಿಡುಗಡೆಗೊಂಡಿದ್ದ ಎರಡು ಕನಸು ಸಿನಿಮಾದ ಪ್ರಮೋಷನ್ ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿ ಪರಮೇಶ್ ಎಂಬವರನ್ನು ಕಿಡ್ನಾಪ್ ಮಾಡಿದ್ದ ಚಿತ್ರದ ನಿರ್ದೇಶಕ ಮದನ್ ಅವರನ್ನು ಮಾಗಡಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಶನಿವಾರ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಎರಡು ಕನಸು ಚಿತ್ರದ ಪ್ರಮೋಷನ್ ಗಾಗಿ ನಿರ್ದೇಶಕ ಮದನ್ ಅವರು ಪರಮೇಶ್ ಎಂಬವರಿಗೆ 16.3 ಲಕ್ಷ ರೂಪಾಯಿ ನಗದು ನೀಡಿದ್ದರು. ಆದರೆ ಸಿನಿಮಾದ ಪ್ರಮೋಷನ್ ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿ, ತನಗೆ 8 ಲಕ್ಷ ರೂಪಾಯಿ ವಾಪಸ್ ಕೊಡಿ ಎಂದು ಮದನ್ ಹೇಳಿದ್ದರು.

ಆದರೆ ಪರಮೇಶ್ ಹಣ ಕೊಡಲು ನಿರಾಕರಿಸಿದಾಗ ನಾಲ್ಕು ದಿನಗಳ ಹಿಂದೆ ತಮ್ಮ ಸ್ನೇಹಿತರ ಮೂಲಕ ಬಸವೇಶ್ವರ್ ನಗರ ಮನೆಯಲ್ಲಿದ್ದ ಪರಮೇಶ್ ಅವರನ್ನು ಮದನ್ ಅವರು ಕಿಡ್ನಾಪ್ ಮಾಡಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಮೇರೆಗೆ ಮಾಗಡಿ ರಸ್ತೆ ಠಾಣೆ ಪೊಲೀಸರು ಎರಡು ಕನಸು ಸಿನಿಮಾದ ನಿರ್ದೇಶಕ ಮದನ್ ಅವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ತೆರೆ ಕಂಡಿದ್ದ ಎರಡು ಕನಸು ಹೊಸ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ನಾಯಕ ನಟರಾಗಿ ಅಭಿನಯಿಸಿದ್ದರೆ, ಕಾರುಣ್ಯ ರಾಮ್ ಹಾಗೂ ಪ್ರಜ್ಜು ಪೂವಯ್ಯ ನಾಯಕಿರಾಗಿ ನಟಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next