Advertisement
ಅಕ್ಕಲ್ಕೋಟೆಯ ವಿರಕ್ತ ಮಠದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಪೂಜ್ಯ ಬಸವಲಿಂಗ ಶ್ರೀಗಳ ಸಾನಿಧ್ಯದಲ್ಲಿ ಬಸವ ಪ್ರತಿಮೆಗೆ ಪೂಜೆ ಸಲ್ಲಿಸಿ ಬಸವ ವಿದ್ಯಾ ದಾಸೋಹ -21 ಎಂಬ ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಿದರು.
Related Articles
Advertisement
ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳ ಅಥವಾ ಆರ್ಥಿಕ ತೊಂದರೆಗಳಲ್ಲಿರುವ ವಿದ್ಯಾರ್ಥಿಗಳ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಮೂವರು ಆಪ್ತ ಸಂಬಂಧಿಕರ ಹೆಸರುಗಳು, ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳನ್ನು ತಿಳಿಸುವಂತೆ ಚನ್ಮಲ್ಲಪ್ಪ ಶೆಟ್ಟಿ ಮನವಿ ಮಾಡಿದ್ದಾರೆ.
ಸಮಾಜದ ಅನೇಕ ಲೋಕೋಪಕಾರಿಗಳು, ಶಿಕ್ಷಣ ಸಂಸ್ಥೆಗಳು ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಒಪ್ಪಿಕೊಂಡಿವೆ. ಈ ಯೋಜನೆ ಎಲ್ಲ ಧರ್ಮದ ವಿದ್ಯಾರ್ಥಿಗಳಿಗೆ ಮತ್ತು ಎಲ್ಲ ಜಾತಿಗಳಿಗೆ ಲಭ್ಯವಾಗಲಿದ್ದು, ಹಿಚ್ಚಿನ ಮಾಹಿತಿಗಾಗಿ ಚನ್ಮಲ್ಲಪ್ಪ ಶೆಟ್ಟಿ ಅವರನ್ನು ಸಂಪರ್ಕಿಸುವಂತೆ ಪ್ರೊ| ಸಂತೋಷ್ ಅಗರಖೇಡ್ ಮನವಿ ಮಾಡಿದ್ದಾರೆ.
ಪ್ರೊ| ಉಮಾಕಾಂತ ಚನಶೆಟ್ಟಿ, ರಾಜು ಚನಶೆಟ್ಟಿ, ಕಾಶಿನಾಥ್ ಭತಗುಣಕಿ, ಕಾಶಿನಾಥ್ ಗೋಳ್ಳೆ, ರಾಜಶೇಖರ್ ಹಿಪ್ಪರಗಿ, ಎಂಜಿನಿಯರ್ ಕಿರಣ್ ಪಾಟೀಲ, ಮಲ್ಲಮ್ಮಾ ಪಸಾರೆ, ಸುಚೇತಾ ಹಿರೇಮಠ, ಮನೀಶಾ ಮಾಳಶೆಟ್ಟಿ, ಡಾ| ಬಸವರಾಜ್ ಚಿನಕೇಕರ್, ಪ್ರೊ| ಸಂತೋಷ್ ಅಗರಖೇಡ್, ಹೇಮಂತ್ ಹಿರೆಮಠ, ಸಿದ್ಧಯ್ಯ ಮಠ, ಸೋಮನಾಥ್ ಮಾಳಶೆಟ್ಟಿ, ಶಿವಾನಂದ ಗೋಗಾಂವ, ರಾಮ ಸಮಾಣೆ ಇವರನ್ನು ಕಾರ್ಯಕಾರಿ ಸಮಿತಿಗೆ ನೇಮಿಸಲಾಗಿದೆ. ಈ ಸಂದರ್ಭ ರೇವಣಸಿದ್ಧ ದಿಕಸಂಗಿ, ವೀರೇಶ್ ಕೋಳ್ಳೆ, ಸಿಕಂದರ್ ಚೌಸ್, ಸಂಜಯ ಅಡವಿತೋಟೆ, ಧನರಾಜ್ ಶಿಂಧೆ, ರಾಜಶೇಖರ್ ಪವಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.