Advertisement

ವರ್ಷಾಂತ್ಯಕ್ಕೆ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ : ಸುಧಾಂಶು ಪಾಂಡೆ

10:00 PM Sep 03, 2021 | Team Udayavani |

ನವದೆಹಲಿ: ದೇಶದಲ್ಲಿ ಖಾದ್ಯ ತೈಲಗಳ ಬೆಲೆ ವರ್ಷಾಂತ್ಯಕ್ಕೆ ಇಳಿಕೆಯಾಗಲಿವೆ ಎಂದು ಕೇಂದ್ರ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.

Advertisement

“ಹಾಲಿ ಮಾನ್ಸೂನ್‌ನಲ್ಲಿ ಬೆಳೆಯುವ ಎಣ್ಣೆ ಕಾಳುಗಳು ವರ್ಷಾಂತ್ಯದ ಹೊತ್ತಿಗೆ ಮಾರುಕಟ್ಟೆಗೆ ಕಾಲಿಡಲಿವೆ. ಜಾಗತಿಕ ಮಟ್ಟದಲ್ಲೂ ಖಾದ್ಯ ತೈಲದ ಬೆಲೆ ಕಡಿಮೆಯಾಗುವುದರಿಂದ ದೇಶದಲ್ಲಿ ಲಭ್ಯವಾಗುವ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುತ್ತದೆ. ಆದರೆ, ಬೆಲೆಗಳು ಏಕಾಏಕಿ ಇಳಿಮುಖವಾಗುವುದಿಲ್ಲ. ನಿಧಾನವಾಗಿ ಇಳಿಕೆಯಾಗುತ್ತದೆ” ಎಂದಿದ್ದಾರೆ.

ಕಳೆದೊಂದು ವರ್ಷದಿಂದ ಜಾಗತಿಕ ಮಟ್ಟದಲ್ಲಿ ಏರಿದ ಬೆಲೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲೂ ಖಾದ್ಯ ತೈಲದ ಬೆಲೆ ಶೇ. 64ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ :ಅಂಟಾಲಿಯಾ ಪ್ರಕರಣ: ಮಾಜಿ ಪೊಲೀಸ್‌ ಅಧಿಕಾರಿ ಸೇರಿ 10 ಮಂದಿ ವಿರುದ್ಧ ಚಾರ್ಜ್‌ಶೀಟ್‌

Advertisement

Udayavani is now on Telegram. Click here to join our channel and stay updated with the latest news.

Next