Advertisement

ಎಡಮಂಗಲ: ರೈಲು ಢಿಕ್ಕಿಯಾಗಿ ವ್ಯಕ್ತಿ ಸಾವು

01:11 AM May 12, 2024 | Team Udayavani |

ಸುಳ್ಯ: ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲ ಎಂಬಲ್ಲಿ ಶನಿವಾರ ಅಪರಾಹ್ನ ಸಂಭವಿಸಿದೆ.

Advertisement

ರೈಲ್ವೇ ಇಲಾಖೆಯ ನಿವೃತ್ತ ನೌಕರ ಎಡಮಂಗಲದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ (68) ಮೃತರು.

ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮನೆ ಕಡೆಗೆ ಹೋಗಲು ರೈಲು ಹಳಿ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ವಿಜಾಪುರ ತೆರಳುವ ವಿಜಾಪುರ ಎಕ್ಸ್‌ಪ್ರೆಸ್‌ ರೈಲು ಢಿಕ್ಕಿ ಹೊಡೆಯಿತು.

ಢಿಕ್ಕಿಯ ರಭಸಕ್ಕೆ ಮಹಾಲಿಂಗ ನಾಯ್ಕರ ದೇಹವನ್ನು ಸುಮಾರು 1 ಕಿ.ಮೀ. ವರೆಗೆ ರೈಲು ಎಳೆದುಕೊಂಡು ಹೋಗಿದ್ದು, ಅವರು ಸ್ಥಳದಲ್ಲೇ ಮೃತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next