Advertisement

ಯೆಸ್ ಬ್ಯಾಂಕ್ ಪ್ರಕರಣ: ಅನಿಲ್ ಅಂಬಾನಿಗೆ ಸಮನ್ಸ್ ನೀಡಿದ ಇಡಿ

10:14 AM Mar 17, 2020 | keerthan |

ಹೊಸದಿಲ್ಲಿ: ಯೆಸ್ ಬ್ಯಾಂಕ್ ಬಿಕ್ಕಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

Advertisement

ಅನಿಲ್ ಅಂಬಾನಿಯವರ ಸಂಸ್ಥೆ ಯೆಸ್ ಬ್ಯಾಂಕ್ ನಿಂದ ಭಾರಿ ಪ್ರಮಾಣದ ಸಾಲ ಪಡೆದಿತ್ತು. ಆದರೆ ಮರು ಪಾವತಿ ಮಾಡಿರಲಿಲ್ಲ. ಸದ್ಯ ಇತಂಹ ಅನೇಕ ಮರುಪಾವತಿ ನಡೆಸದ ಸಾಲಗಳಿಂದಾಗಿ ಯೆಸ್ ಬ್ಯಾಂಕ್ ಬಿಕ್ಕಟ್ಟು ಎದುರಿಸುತ್ತಿದೆ.

ಜಾರಿ ನಿರ್ದೇಶನಾಲಯದ ಮುಂಬೈ ಕಚೇರಿಯಲ್ಲಿ ಸೋಮವಾರ ಅನಿಲ್ ಅಂಬಾನಿಯವರನ್ನು ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಅನಿಲ್ ಅಂಬಾನಿ ವಿನಾಯತಿ ಕೇಳಿದ್ಧಾರೆ ಎನ್ನಲಾಗಿದೆ.

ರಿಲಯನ್ಸ್ ಗ್ರೂಪ್ ಇತರ ಉನ್ನತ  ಅಧಿಕಾರಿಗಳನ್ನು ಈ ವಾರದ ಅಂತ್ಯದಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next