Advertisement

ಆರ್ಥಿಕ ಚೇತರಿಕೆ: ಅಗ್ರ 5ರಲ್ಲಿ ಕರ್ನಾಟಕ

08:51 AM Jun 03, 2020 | mahesh |

ಹೊಸದಿಲ್ಲಿ: ಭಾರತ ದಿಗ್ಬಂಧನದಿಂದ ಬಹುತೇಕ ಮುಕ್ತಗೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಜೂ.8ರಿಂದ ದೇವಸ್ಥಾನಗಳು, ಮಾಲ್‌ಗ‌ಳು, ರೆಸ್ಟೋರೆಂಟ್‌ಗಳು ತೆರೆದುಕೊಳ್ಳಲು ಸಜ್ಜಾಗಿವೆ. ಕೋವಿಡ್ ವನ್ನು ಅತ್ಯುತ್ತಮವಾಗಿ ನಿಭಾಯಿಸಿದೆ ಎಂಬ ಮೆಚ್ಚುಗೆ ಪಡೆದಿರುವ ಕರ್ನಾಟಕಕ್ಕೆ, ಈಗ ಮತ್ತೂಂದು ಸಂತಸದ ಸುದ್ದಿಯೂ ಸಿಕ್ಕಿದೆ. ದಿಗ್ಬಂಧನ ತೆರವಾಗುತ್ತಿರುವ ಈ ಹೊತ್ತಿನಲ್ಲಿ, ವೇಗವಾಗಿ ಆರ್ಥಿಕ ಚೇತರಿಕೆ ಕಾಣುತ್ತಿರುವ 5 ರಾಜ್ಯಗಳಲ್ಲಿ ರಾಜ್ಯವೂ ಒಂದಾಗಿದೆ. ತಮಿಳುನಾಡು, ಕೇರಳ, ಪಂಜಾಬ್‌, ಹರ್ಯಾಣ, ಕರ್ನಾಟಕ ಒಟ್ಟಾಗಿ ದೇಶದ ಜಿಡಿಪಿಗೆ ಶೇ.27ರಷ್ಟು ಕೊಡುಗೆ ನೀಡುತ್ತಿವೆ.

Advertisement

ವಿದ್ಯುತ್‌ ಬಳಕೆ, ಟ್ರಾಫಿಕ್‌ ಚಲನೆ, ಕೃಷಿಯು ತ್ಪನ್ನಗಳ ಲಭ್ಯತೆ, ಸಗಟು ವ್ಯಾಪಾರ ಹಾಗೆಯೇ ಗೂಗಲ್‌ ದತ್ತಾಂಶ ಆಧರಿಸಿ ಆರ್ಥಿಕ ತಜ್ಞೆ ಗರಿಮಾ ಕಪೂರ್‌ ಈ ಹೆಗ್ಗಳಿಕೆಯನ್ನು ಕರ್ನಾಟ ಕಕ್ಕೆ ನೀಡಿದ್ದಾರೆ. ಗರಿಷ್ಠ ಕೈಗಾರಿಕಾ ನಗರಿಗಳೆನಿಸಿ ಕೊಂಡಿರುವ ಮಹಾರಾಷ್ಟ್ರ, ಗುಜರಾತ್‌ಗಳೇ ಇನ್ನೂ ಒದ್ದಾಡುತ್ತಿವೆ ಎನ್ನುವುದನ್ನು ಇಲ್ಲಿ ನಾವು ಗಮನಿಸಬೇಕು. ಸದ್ಯ ಕ್ಷೌರದಂಗಡಿ, ಎಸಿ, ವಿಮಾನಯಾನ, ಬೈಕ್‌, ವ್ಯಾಕ್ಯೂಮ್‌ ಕ್ಲೀನರ್‌ಗಳು, ವಾಷಿಂಗ್‌ ಮಷಿನ್‌ಗಳು, ದಿನಸಿಗೆ ಮತ್ತೆ ಬೇಡಿಕೆ ಬಂದಿದೆ. ಹಾಗಂತ ಹೇರ್‌ ಆಯಿಲ್‌, ಲ್ಯಾಪ್‌ಟಾಪ್‌, ಮೊಬೈಲ್‌, ಆಭರಣ, ಆಟಿಕೆಗಳನ್ನೂ ಮರೆತಿಲ್ಲ ಎಂದು ಗರಿಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next