Advertisement
ಎಲ್ಲಿದೆ ಮಕ್ಕಳ ಹಕ್ಕು ಆಯೋಗ?: ಅದೇ ರೀತಿ, ಶಾಹಿನ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ನಾಟಕವೊಂದರಲ್ಲಿ ಪಾತ್ರ ಮಾಡಿದ ವಿದ್ಯಾರ್ಥಿನಿ ಹಾಗೂ ಆ ಮಗುವಿನ ತಾಯಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತದೆ. ಕೇವಲ ಐದು ದಿನಗಳ ಅಂತರದಲ್ಲಿ ಆ ಶಾಲೆಯ ಸುಮಾರು 52 ಮಕ್ಕಳನ್ನು ವಿಚಾರಣೆಗೊಳಪಡಿಸಿ ದ್ದಾರೆ. ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಗಳು ಇದ್ದೂ ಇಲ್ಲದಂತಾಗಿವೆ ಎಂದು ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯ ಆ ತಾಯಿ-ಮಗಳಿಗೆ ಜಾಮೀನು ನೀಡಿದರೂ ತಲಾ ಎರಡು ಲಕ್ಷ ರೂ.ಠೇವಣಿ ಇಡಬೇಕಿದೆ.
Related Articles
Advertisement
ಗೋಲಿಬಾರ್ ನಡೆಸಿದ ಅಧಿಕಾರಿಗಳ ವಿರುದ್ಧ ಇದುವರೆಗೆ ಕ್ರಮ ಕೈಗೊಂಡಿಲ್ಲ. 24 ಗಂಟೆ ಕಾರ್ಯ ನಿರ್ವಹಿಸುವ ಸಿಸಿ ಕ್ಯಾಮರಾದಲ್ಲಿನ ವೀಡಿಯೊ ತುಣುಕನ್ನು ಈವರೆಗೆ ಯಾಕೆ ಬಿಡುಗಡೆ ಮಾಡಿಲ್ಲ. ಈ ಎಲ್ಲ ನಡೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ನ್ಯಾಯಾಂಗ ತನಿಖೆ ನಡೆಸಬೇಕು ಎಂದರು. ಈ ಮಧ್ಯೆ, ಆಯನೂರು ಮಂಜುನಾಥ್, ಚರ್ಚೆ ವಿಷಯ ಬೇರೆ, ಬೇರೆ ಆಗುತ್ತಿದೆ. ಕಾನೂನು ಸುವ್ಯವಸ್ಥೆ ವೈಫಲ್ಯ ಮತ್ತು ಅದರಿಂದ ಅಭಿವೃದ್ಧಿ ಹೇಗೆ ಕುಂಠಿತವಾಗಿದೆ ಎನ್ನುವುದರ ಚರ್ಚೆ ಗೌಣವಾಗಿದೆ ಎಂದು ಗಮನ ಸೆಳೆದರು.
ಪ್ರಕರಣ ಒಂದು; ಮುಖಗಳು ಎರಡು!: ಸದನದಲ್ಲಿ ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಸ್ಪರ್ಧೆಗಿಳಿದಂತೆ ಭಾವಚಿತ್ರಗಳ ಪ್ರದರ್ಶನ ನಡೆಸಿದವು! ಮೊದಲಿಗೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೊಡ್, ಗಲಭೆ ವೇಳೆ ಪೊಲೀಸರು ಜಾವಲಿನ್ ಥ್ರೋ ರೀತಿ ಕಲ್ಲುಗಳನ್ನು ಎಸೆಯುತ್ತಿದ್ದಾರೆ ಎಂದು ಫೋಟೋಗಳನ್ನು ಪ್ರದರ್ಶಿಸಿದರು. ಬೆನ್ನಲ್ಲೇ ಮಹಾಂತೇಶ ಕವಟಗಿಮಠ, “ಇದಕ್ಕೆ ಏನು ಹೇಳುತ್ತೀರಾ?’ ಎಂದು ಮುಖಕ್ಕೆ ಬಟ್ಟೆಕಟ್ಟಿಕೊಂಡು ಕಲ್ಲು ಎಸೆಯುತ್ತಿರುವ ಫೋಟೋ ಮುಂದಿಟ್ಟರು.
ಈ ಮಧ್ಯೆ ಬಿ.ಎಂ.ಫಾರೂಕ್ ಕೂಡ ಸಿಡಿ ಮತ್ತು ಕೆಲವು ದಾಖಲೆಗಳನ್ನು ಸಭಾಪತಿಗೆ ಸಲ್ಲಿಸಿದರು. ಒಂದೇ ಪ್ರಕರಣದ ಈ “ಭಿನ್ನ ಮುಖ’ಗಳು ಉಳಿದ ಸದಸ್ಯರನ್ನು ಗೊಂದಲಕ್ಕೀಡು ಮಾಡಿದವು. ಇದರಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದರ ಬಗ್ಗೆಯೇ ತನಿಖೆ ನಡೆಸಬೇಕು. ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಬಸವ ರಾಜ ಹೊರಟ್ಟಿ, ಸಿ.ಎಂ.ಇಬ್ರಾಹಿಂ, ಪುಟ್ಟಣ್ಣ ಆಗ್ರಹಿಸಿದರು.