Advertisement

ವಿವಿಗಳ ಅಕ್ರಮಗಳ ಬಗ್ಗೆ ಎಚ್‌ಡಿಕೆಗೇನು ಗೊತ್ತು?

03:45 AM Feb 04, 2017 | Team Udayavani |

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಇಲಾಖೆ ಬಗ್ಗೆ ಏನು ಗೊತ್ತಿದೆ? ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನಿಸಿದ್ದಾರೆ. 

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರದಿಂದ ಇಳಿದ ತಕ್ಷಣ ಅವರಿಗೆ ಎಲ್ಲ ಗೊತ್ತಿರುತ್ತೆ ಎಂದಲ್ಲ. ಏನು ಗೊತ್ತಿಲ್ಲದೇ ವಿನಾಕಾರಣ ವಿವಿಗಳ ಅಕ್ರಮಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ವಿವಿಗಳ ಅಕ್ರಮ ನಮಗೆ ಗೊತ್ತಾಗಿದೆ. ಅದನ್ನು ನಾವು ತನಿಖೆ ಮಾಡಿಸಲು ಶುರು ಮಾಡಿದ್ದೇವೆ ಎಂದು ತಿಳಿಸಿದರು. 

ಸ್ಕೂಲ್‌ ಆಫ್‌ ಎಕನಾಮಿಕ್ಸ್‌ಗೆ ರಾಜ್ಯ ಸರ್ಕಾರ 300 ಕೋಟಿ ರೂ. ಕೊಡಲು ಒಪ್ಪಿದೆ. ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದೇವೆ. ಜುಲೈನಲ್ಲಿ ಇಂಟರನ್ಯಾಷನಲ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಆರಂಭವಾಗಲಿದೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next