Advertisement

ಅನುಮತಿ ಇಲ್ಲದೆ ರ‍್ಯಾಲಿ : ಗಂಭೀರ್‌ ವಿರುದ್ಧ ಎಫ್ಐಆರ್‌ ದಾಖಲಿಸಲು ಸೂಚನೆ

09:09 AM Apr 29, 2019 | Vishnu Das |

ಹೊಸದಿಲ್ಲಿ : ಚುನಾವಣಾ ಆಯೋಗದ ಅನುಮತಿ ಪಡೆಯದೆ ರ‍್ಯಾಲಿ ನಡೆಸಿದ ಕಾರಣಕ್ಕಾಗಿ ಕ್ರಿಕೆಟಿಗ, ದಕ್ಷಿಣ ದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ ವಿರುದ್ಧ ಎಫ್ಐಆರ್‌ ದಾಖಲಿಸಲು ಸೂಚನೆ ನೀಡಲಾಗಿದೆ.

Advertisement

ಎಎನ್‌ಐ ವರದಿಯಂತೆ ಎಪ್ರಿಲ್‌ 25 ರಂದು ದೆಹಲಿಯ ಜಂಗ್‌ಪುರದಲ್ಲಿ ರ‍್ಯಾಲಿ ನಡೆಸಲು ಗಂಭೀರ್‌ ಆಯೋಗದ ಅನುಮತಿ ಪಡೆದಿರಲಿಲ್ಲ.

ದೆಹಲಿ ಪೊಲೀಸ್‌ ಕಾಯಿದೆಯ ಪ್ರಕಾರ ಗಂಭೀರ್‌ ವಿರುದ್ಧ ಗುರುತಿಸಲಾಗದ ವರದಿಯನ್ನು ಸಲ್ಲಿಸಿ ಎಫ್ಐಆರ್‌ ದಾಖಲಿಸಲಾಗುತ್ತಿದೆ.

ದಕ್ಷಿಣ ದೆಹಲಿಯ ರಿಟರ್ನಿಂಗ್‌ ಆಫೀಸರ್‌ಗೆ ಚುನಾವಣಾ ಆಯೋಗ ಎಫ್ಐಆರ್‌ ದಾಖಲಿಸುವಂತೆ ಸೂಚನೆ ನೀಡಿದೆ.

ಗಂಭೀರ್‌ ಎರಡು ವೋಟರ್‌ ಐಡಿ ಹೊಂದಿದ್ದಾರೆ ಎಂದು ಆಪ್‌ ಅಭ್ಯರ್ಥಿ ಆತಿಷಿ ಅವರು ದೂರು ಸಲ್ಲಿಸಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.

Advertisement

ಭರ್ಜರಿ ಪ್ರಚಾರದ ಹುರುಪಿನಲ್ಲಿದ್ದ ಗಂಭೀರ್‌ಗೆ ಈಗ ಹೊಸ ಸಂಕಷ್ಟ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next