Advertisement

Muddebihala: ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜನೆ: ಗೂಡಂಗಡಿಗಳ ತೆರವು

01:13 PM Jan 25, 2024 | Kavyashree |

ಮುದ್ದೇಬಿಹಾಳ: ಪಟ್ಟಣದ ತಾಲೂಕು ಆಡಳಿತ ಸೌಧದ ಸರ್ಕಾರಿ ಜಾಗ ಅತಿಕ್ರಮಿಸಿ ಇಡಲಾಗಿದ್ದ ಗೂಡಂಗಡಿಗಳನ್ನು ತಾಲೂಕಾಡಳಿತ, ಪುರಸಭೆ ಮತ್ತು ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲು ಬೆಳಿಗ್ಗೆ ಪ್ರಾರಂಭಿಸಲಾಗಿದೆ.

Advertisement

ಕೊರೆಯುವ ಚಳಿಯಲ್ಲೂ ಅಧಿಕಾರಿಗಳು, ಪೊಲೀಸರು, ಪುರಸಭೆ ಸಿಬ್ಬಂದಿ ಜೊತೆ ಜೆಸಿಬಿ ಬಳಿಸಿ ಬಹುತೇಕ ಅಂಗಡಿಗಳನ್ನು ನೆಲಸಮಗೊಳಿಸತೊಡಗಿದ್ದಾರೆ.

ಈ ಬಗ್ಗೆ ಎದುರಾದ ಪ್ರತಿರೋಧವನ್ನು ಯಾವ ಅಧಿಕಾರಿಯೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಈ ಡಬ್ಬಾ ಅಂಗಡಿಗಳನ್ನು ಸರ್ಕಾರಿ ಜಾಗ ಅತಿಕ್ರಮಿಸಿ ಇಡಲಾಗಿತ್ತು. ನಿತ್ಯವೂ ಕಚೇರಿ ಕೆಲಸಗಳಿಗೆ ಹೋಗಿ ಬರುವ ಸಾರ್ವಜನಿಕರ ಸುಲಿಗೆ ಮಾಡಲು ಕೆಲ ಅಂಗಡಿಕಾರರು ಮುಂದಾಗಿದ್ದರು. ಇದನ್ನು ಖಂಡಿಸಿ, ಅನಧಿಕೃತವಾಗಿ ಇಟ್ಟಿರುವ ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು, ಮಾಧ್ಯಮದವರು ತಹಶೀಲ್ದಾರ್, ಜಿಲ್ಲಾಧಿಕಾರಿ ಸೇರಿ ಹಲವರ ಮೇಲೆ ಭಾರೀ ಒತ್ತಡ ಹಾಕಿದ್ದರು.

ಸ್ಥಳೀಯ ಶಾಸಕರು ಕೂಡಾ ಅತಿಕ್ರಮಣ ತೆರವು ಪರ ಇದ್ದರು. ಹೀಗಾಗಿ ತೆರವು ಕಾರ್ಯಾಚರಣೆ ಬರದಿಂದ ಸಾಗಿದೆ. ಕಾಲಾವಕಾಶ ಕೊಟ್ಟರೂ ತೆರವುಗೊಳಿಸದ ಅಂಗಡಿಗಳು ಜೆಸಿಬಿ ಹೊಡೆತಕ್ಕೆ ಸಿಲುಕಿ ಛಿದ್ರಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next