Advertisement

ಇ-ಸ್ಟ್ಯಾಂಪಿಂಗ್ ಕೇಂದ್ರ ಉದ್ಘಾಟನೆ

04:18 PM Dec 14, 2019 | Suhan S |

ಮಂಡ್ಯ: ವಕೀಲರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಇ-ಸ್ಟಾಂಪಿಂಗ್‌ ಮಾರಾಟ ಕೇಂದ್ರವನ್ನು ಸಂಘದ ಅಧ್ಯಕ್ಷ ಎಂ.ಬಿ.ಬಸವರಾಜು ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಅವರು, ನ್ಯಾಯಾಲಯ ಸಂಕೀರ್ಣದಲ್ಲಿ ಇ-ಸ್ಟಾಂಪಿಂಗ್‌ ವ್ಯವಸ್ಥೆ ಇಲ್ಲದ ಕಾರಣ ವಕೀಲರು ಮತ್ತು ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ನಮ್ಮ ಸಂಘದ ವತಿಯಿಂದ ಇ-ಸ್ಟಾಂಪಿಂಗ್‌ ಮಾರಾಟ ಕೇಂದ್ರ ಸ್ಥಾಪಿಸಿ ಎಲ್ಲರಿಗೂ ಅನುಕೂಲ ಕಲ್ಪಿಸಲಾಗಿದೆ ಎಂದರು.

ಇದು ವಕೀಲರಿಗೂ ಸಾರ್ವಜನಿಕರಿಗೂ ತುಂಬಾ ಅನುಕೂಲವಾಗುತ್ತದೆ. ಸಾರ್ವಜನಿಕರು ಮತ್ತು ವಕೀಲರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘ, ಹೊಂಬೇಗೌಡ ಮೆಮರಿಯಲ್‌ ರಿಕ್ರಿಯೇಷನ್‌ ಕ್ಲಬ್‌ ಸಹಕಾರದಿಂದ ಇ-ಸ್ಟಾಂಪಿಂಗ್‌ ಮಾರಾಟ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಸಂಘದ ಉಪಾ ಧ್ಯಕ್ಷ ಜೆ.ಎಸ್‌.ರಾಜೀವ, ಕಾರ್ಯನಿರ್ವಹಣಾಧಿಕಾರಿ ಮಂಗಳಗೌರಿ, ನಿರ್ದೇಶಕರಾದ ಬಿ.ವಿ.ತಿರುಮಲಸ್ವಾಮಿ, ಜಿ.ಗಿರೀಗೌಡ, ಕೆಂಪೇಗೌಡ, ಎಸ್‌. ಬೃಂದಾ, ಚಂದ್ರಕಲಾ, ಎಸ್‌.ಶಂಕರಪ್ಪ, ಜಿ.ಕೆ.ಶಿವಕುಮಾರ್‌, ಆರ್‌. ರೇಣುಕಾರಾಧ್ಯ, ಕೆ.ಬಿ.ಸೋಮಶೇಖರ್‌, ಕಾಂತರಾಜು, ಪಿ.ವಿ.ವಿನಯ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next