Advertisement

ಅಖೀಲೇಶ್‌ ಬಳಿಕ ಮಾಯಾಗೆ ತಟ್ಟಿದ ಇ.ಡಿ.ದಾಳಿಯ ಬಿಸಿ

12:30 AM Feb 01, 2019 | |

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಗಣಿಗಾರಿಕೆ ಪ್ರಕರಣವು ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ರನ್ನು ಸಂಕಷ್ಟಕ್ಕೆ ಸಿಲುಸಿಕಿದ ಬೆನ್ನಲ್ಲೇ ಈಗ ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೂ ಬಿಸಿ ತಟ್ಟಿದೆ. ಸ್ಮಾರಕ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಗುರುವಾರ ಉ.ಪ್ರದೇಶದ 6 ಪ್ರದೇಶಗಳಲ್ಲಿ ದಾಳಿ ನಡೆಸಿದೆ.

Advertisement

ಮಾಯಾವತಿ ಅಧಿಕಾರಾವಧಿಯಲ್ಲಿ ಅಂದರೆ 2007ರಿಂದ 2012ರ ಅವಧಿಯಲ್ಲಿ ಬಿಎಸ್‌ಪಿ ಸ್ಥಾಪಕ ಕಾನ್ಶಿàರಾಮ್‌, ಬಿಎಸ್‌ಪಿ ಚಿಹ್ನೆ ಆನೆ ಮತ್ತಿತರ ಸ್ಮಾರಕಗಳನ್ನು ನಿರ್ಮಾಣ ವೇಳೆ 111 ಕೋಟಿ ರೂ.ಗಳ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಗುರುವಾರ ಯುಪಿ ನಿರ್ಮಾಣ ನಿಗಮದ ಎಂಡಿ ಸಿಪಿ ಸಿಂಗ್‌ ಲಕ್ನೋ ನಿವಾಸ, ಹಗರಣದಲ್ಲಿ ಪಾಲ್ಗೊಂಡ ಗುತ್ತಿಗೆದಾ ರರ ಕಚೇರಿಗಳು, ಮನೆಗಳಲ್ಲೂ ಶೋಧ ಕಾರ್ಯ ನಡೆಸಿದೆ. ಈ ಹಿಂದೆ ಯುಪಿ ಲೋಕಾಯುಕ್ತ ಕೂಡ ಸ್ಮಾರಕ ಹಗರಣ ಸಂಬಂಧ ಮಾಯಾವತಿ ಅವರ ಸಂಪುಟ ಸಹೋದ್ಯೋಗಿಗಳಾಗಿದ್ದ ನಸೀಮುದ್ದೀನ್‌ ಸಿದ್ದಿಕಿ, ಬಾಬು ಸಿಂಗ್‌ ಕುಶ್ವಾಹಾ ಮತ್ತು 12 ಬಿಎಸ್ಪಿ ಶಾಸಕರ ವಿರುದ್ಧ ಆರೋಪ ಹೊರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next