Advertisement

ರಾಷ್ಟ್ರಪತಿ ಪದಕ ಪಡೆದ ಡಿವೈಎಸ್ಪಿಗೆ ಸನ್ಮಾನ

11:29 AM Jan 27, 2018 | Team Udayavani |

ಚಿಂಚೋಳಿ: ತಾಲೂಕು ಆರಕ್ಷಕ ಉಪಾಧೀಕ್ಷಕರ ಪೊಲೀಸ್‌ ಇಲಾಖೆ ಉಪ ವಿಭಾಗದ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿರುವ ಯು. ಶರಣಪ್ಪ ರಾಷ್ಟ್ರಪತಿ ಪದಕ, ಪ್ರಶಸ್ತಿ ಪಡೆದುಕೊಂಡಿರುವುದಕ್ಕಾಗಿ ಅವರನ್ನು ರಾಜ್ಯ ಸರಕಾರದ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್‌ ಪೊಲೀಸ್‌ ಪರೇಡ ಮೈದಾನದಲ್ಲಿ ನಡೆದ 69ನೇ ಗಣಾರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ| ಉಮೇಶ ಜಾಧವ್‌, ಉಪ-ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಆಡಳಿತಗಾರನಾಗಿ ಯು. ಶರಣಪ್ಪ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ರಾಷ್ಟ್ರಪತಿ ಪದಕ ದೊರೆತಿರುವುದು
ಸಂತಸವಾಗಿದೆ ಎಂದರು.

ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್‌ ಯಾಕಾಪುರ, ಬಿಇಒ ದತ್ತಪ್ಪ ತಳವಾರ, ಎಇಇ ಅಶೋಕ ತಳವಾಡೆ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಅಮರ ಲೊಡನೋರ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ತಾಪಂ ಅಧಿಕಾರಿ ಶಿವಾಜಿರಾವ್‌ ಡೋಣಿ, ತಹಶೀಲ್ದಾರ್‌ ಪಂಡಿತರಾವ್‌ ಬಿರಾದಾರ, ಸಿಪಿಐ ಇಸ್ಮಾಯಿಲ್‌ ಶರೀಫ, ಶಿರಸ್ತೇದಾರ ವೆಂಕಟೇಶ ದುಗ್ಗನ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next