Advertisement

ಈಶ್ವರಪ್ಪಗೆ ಮಣಿದ BSY: ವೆಂಕಟೇಶಮೂರ್ತಿ ಅಮಾನತು ವಾಪಸ್‌ 

11:26 AM Apr 25, 2017 | |

ಬೆಂಗಳೂರು:  ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆಯಲ್ಲಿ ಪಾಲ್ಗೊಂಡ ಕಾರಣದಲ್ಲಿ ಮಾಜಿ ಮೇಯರ್‌ ಡಿ.ವೆಂಕಟೇಶ್‌ಮೂರ್ತಿ ಅವರನ್ನು ಅಮಾನತು ಮಾಡಿ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಬಿಜೆಪಿ ವಾಪಾಸ್‌ ಪಡೆದಿದೆ. 

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಸದಾಶಿವ ಅವರು ಅಮಾನತು ಆದೇಶವನ್ನು ವಾಪಾಸ್‌ ಪಡೆದಿದ್ದಾರೆ.

ಕೆ.ಎಸ್‌.ಈಶ್ವರಪ್ಪ ಅವರು ವೆಂಕಟೇಶ್‌ಮೂರ್ತಿ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದರು. 

ಇದೀಗ ಉಪಚುನಾವಣೆ ಫ‌ಲಿತಾಂಶ ಪ್ರಕಟವಾಗಿ ಪಕ್ಷಕ್ಕೆ ಹಿನ್ನಡೆಯಾದ ಬಳಿಕ ಯಡಿಯೂರಪ್ಪ ತಮ್ಮ ಧೋರಣೆ ಬದಲಿಸಿಕೊಂಡಿದ್ದಾರೆ ಎನ್ನಲಾಗಿದ್ದು,ಈಶ್ವರಪ್ಪ ಪಟ್ಟಿಗೆ ಮಣಿದು ಅಮಾನತು ಆದೇಶ ವಾಪಾಸ್‌ ಪಡೆದಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next