Advertisement

ದತ್ತಾ ಮುಂದುವರಿಕೆ ಇಲ್ಲ: ಗೃಹ ಸಚಿವ

07:55 AM Oct 23, 2017 | Team Udayavani |

ಕಲಬುರಗಿ: “ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ಕುಮಾರ ಕೆ. ದತ್ತಾ ಅವರನ್ನು ನಿವೃತ್ತಿ ನಂತರವೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಂದುವರಿಸುವುದಿಲ್ಲ.ಅರ್ಹರಿರುವ ಐವರೊಳಗೆ ಒಬ್ಬರನ್ನು ನಿಯೋಜಿಸಲಾಗುವುದು’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Advertisement

ಇಲ್ಲಿನ ಪೊಲೀಸ್‌ ಭವನದಲ್ಲಿ ಈಶಾನ್ಯ ವಲಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಮುಖ್ಯ ಕಾರ್ಯದರ್ಶಿಗಳನ್ನು ಈ ಹಿಂದೆ ವಿಶೇಷ ಸಂದರ್ಭದಲ್ಲಿ ಕೆಲ ತಿಂಗಳು ಮುಂದುವರಿಸಲಾಗಿತ್ತು. ಆದರೆ ಡಿಜಿಪಿ ನೇಮಕದಲ್ಲಿ ಹಾಗೆ ಮಾಡಲಿಕ್ಕಾಗದು’ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಕಾರಾಗೃಹದ ಮೇಲೆ ಬಂಧಿಖಾನೆ ಡಿಐಜಿ ಆಗಿದ್ದ ಡಿ. ರೂಪಾ ದಾಳಿ ನಡೆಸಿದ ಕುರಿತ ವರದಿ ಪರಿಶೀಲಿಸಲಾಗುವುದು.ಅಲ್ಲದೆ ನೀಡಲಾಗಿರುವ ಶಿಫಾರಸುಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರಲ್ಲದೇ ವರದಿ ಸಂಪೂರ್ಣವಾಗಿ ನೋಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next