Advertisement

ಧೂಳುಮಯ ರಸ್ತೆ : ಬಾಯಿ ಬಡಿದುಕೊಂಡು ಪ್ರತಿಭಟನೆ

10:47 AM Nov 09, 2019 | Team Udayavani |

ಹುಬ್ಬಳ್ಳಿ: ನಗರದ ಧೂಳುಮಯ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಹೂ ಬಳ್ಳಿ ನಾಗರಿಕರ ವೇದಿಕೆಯಿಂದ ಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಬಾಯಿ ಬಡಿದುಕೊಂಡು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಯಾವುದೇ ರಸ್ತೆಗಳಿಗೆ ಹೋದರೂ ಬರಿ ಧೂಳು ಹಾಗೂ ಗುಂಡಿಮಯವಾಗಿದೆ. ನಗರದ ಪ್ರಮುಖ ರಸ್ತೆಗಳಾದ ಕಿತ್ತೂರು ಚನ್ನಮ್ಮ ವೃತ್ತ, ಕೋರ್ಟ್‌ ವೃತ್ತ, ದೇಸಾಯಿ ವೃತ್ತ, ಲ್ಯಾಮಿಂಗ್ಟನ್‌ ರಸ್ತೆ, ಸ್ಟೇಶನ್‌ ರಸ್ತೆ, ಕೊಪ್ಪಿಕರ ರಸ್ತೆ, ದಾಜೀಬಾನ ಪೇಟೆ, ತುಳಜಾಭವಾನಿ ವೃತ್ತ, ಹಳೇ ಹುಬ್ಬಳ್ಳಿ ಭಾಗದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, ಅದಕ್ಕೆ ಹಾಕಿರುವ ವೆಟ್‌ಮಿಕ್ಸ್‌ ನಿಂದ ಇಡೀ ನಗರ ಧೂಳುಮಯವಾಗಿದೆ. ಸಾರ್ವಜನಿಕರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು, ಕೂಡಲೇ ಹುಬ್ಬಳ್ಳಿ ನಗರವನ್ನು ಧೂಳುಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೇವಣಸಿದ್ದಪ್ಪ ಹುಬ್ಬಳ್ಳಿ, ಗಂಗಾಧರ ಗುಜಮಾಗಡಿ, ರವಿ ಶೆರೆವಾಡ, ಮೂರುಸಾವಿರಪ್ಪ ಮೆಣಸಿನಕಾಯಿ, ಇಂದಿರಾ ಚವ್ಹಾಣ, ರಮೇಶ, ಸಂಜೀವ ದುಮ್ಮಕ್ಕನಾಳ, ಮಹಾದೇವ ಹುಡೇದ, ವಿಶ್ವಾಸರಾವ್‌ ಜಾಧವ, ರೋಹಿದಾಸ ಪೋಳ, ಮಂಜುನಾಥ ವಡ್ಡಿ, ಸಾಗರ ಜಮಖಂಡಿ, ಶ್ರೀಕಾಂತ ಕಿತ್ತೂರ, ವಿಜಯ ಮಿಸ್ಕಿನ್‌, ಆನಂದ ಮಿಸ್ಕಿನ, ಮಂಜುನಾಥ ಗುಂಜಾಳ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next