Advertisement

ವಿಜೃಂಭಣೆಯಿಂದ ನಡೆದ ದುರ್ಗಾಪರಮೇಶ್ವರಿ ರಥೋತ್ಸವ

11:11 AM Mar 23, 2018 | Team Udayavani |

ಕೊಪ್ಪ: ಪಟ್ಟಣದ ಹೊರವಲಯದ ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀಗುತ್ತಿಯಮ್ಮನವರ ವಾರ್ಷಿಕ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆ 6.30ಕ್ಕೆ ಕೆಂಡದಾರ್ಚನೆ ಮಧ್ಯಾಹ್ನ 12.00ಕ್ಕೆ ಶ್ರೀಮನ್ಮಹಾರಥಾರೋಹಣ ಹಾಗೂ ಸಂಜೆ ರಥೋತ್ಸವ ನೆರವೇರಿತು. 

Advertisement

ಕೊಪ್ಪ ಪಟ್ಟಣ, ಹುಲುಮಕ್ಕಿ, ಕುಂಚೂರು, ಅದ್ದಡ, ಕೊಪ್ಪ ಗ್ರಾಮಾಂತರ, ನಾರ್ವೆ, ಮರಿತೊಟ್ಲು, ಅಂದಾಗಾರು ಮುಂತಾದೆಡೆಗಳಿಂದ ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಲ್‌.ಎಂ. ಪ್ರಕಾಶ್‌, ಪದಾಧಿ ಕಾರಿಗಳು, ಜಿಲ್ಲಾ ಪಂಚಾಯತ್‌ ಸದಸ್ಯ ಎಸ್‌.ಎನ್‌. ರಾಮಸ್ವಾಮಿ, ಜೆಡಿಎಸ್‌ ಮುಖಂಡ ಎಚ್‌.ಜಿ. ವೆಂಕಟೇಶ್‌, ಪುಣ್ಯಪಾಲ್‌, ಕೆ.ಆರ್‌. ಶ್ರೀನಿವಾಸ್‌ ಕೋಡ್ರು, ಸತೀಶ್‌, ತಹಶೀಲ್ದಾರ್‌ ಟಿ.ಎಸ್‌. ತನುಜ ಸವದತ್ತಿ, ರಾಜಸ್ವ ನಿರೀಕ್ಷಕ ಶಿವರಾಂ ಮುಂತಾದ
ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next