Advertisement

ರಸ್ತೆ ಮೇಲೆ ಹರಿದ ಕೊಳಚೆ ನೀರು;ವ್ಹೀಲ್ಚೇರ್‌ ಇರಿಸಿ ಪ್ರತಿಭಟನೆ

11:23 AM Jun 29, 2019 | Team Udayavani |

ಹುಬ್ಬಳ್ಳಿ: ಒಳಚರಂಡಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿದ್ದರೂ ಕ್ರಮ ಕೈಗೊಳ್ಳದಿದ್ದರಿಂದ ತಿಮ್ಮಸಾಗರ ದೇವಸ್ಥಾನ ರಸ್ತೆಯಲ್ಲಿ ಡಾ| ಎಂ.ಸಿ.ಸಿಂಧೂರ ನೇತೃತ್ವದಲ್ಲಿ ನಿವಾಸಿಗಳು ಶುಕ್ರವಾರ ವ್ಹೀಲ್ ಚೇರ್‌ ಇರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಳೆದ ಒಂದೂವರೆ ತಿಂಗಳಿಂದ ಒಳಚರಂಡಿ ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತಿದೆ. ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಪೈಪ್‌ಗ್ಳು ಹಳೆಯದಾಗಿದ್ದು, ಅವುಗಳನ್ನು ಬದಲಿಸಬೇಕೆಂದು ಹೇಳುತ್ತಿದ್ದಾರೆ. ಕೂಡಲೇ ಪಾಲಿಕೆ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದರು. ವಲಯ ಸಂಖ್ಯೆ 5 ಹಾಗೂ ವಲಯ ಸಂಖ್ಯೆ 9ರ ಮಧ್ಯೆ ಈ ರಸ್ತೆ ಬರುವುದರಿಂದ ರಸ್ತೆಯ ಜವಾಬ್ದಾರಿಯನ್ನು ಎರಡೂ ವಲಯದವರು ತೆಗೆದುಕೊಳ್ಳದೇ ಕಡೆಗಣಿಸಿದ್ದಾರೆಂದು ಆರೋಪಿಸಿದರು.

ಇಲ್ಲಿನ ನಿವಾಸಿಗಳು ಸಮರ್ಪಕವಾಗಿ ತೆರಿಗೆ ಪಾವತಿಸುತ್ತಿದ್ದರೂ ಬಡಾವಣೆಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿಲ್ಲ. ಒಂದು ವೇಳೆ ಒಳಚರಂಡಿ ದುರಸ್ತಿ ಮಾಡದಿದ್ದರೆ ಮನೆ ತೆರಿಗೆ ತುಂಬದೇ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅರ್ಜುನ ಪವಾರ, ತುಷಾರ ಪವಾರ, ಸೂರಜ್‌ ಕವಳಿ, ಮಂಜುಳಾ ಪವಾರ, ವೆಂಕಟೇಶ ನಾಯಕ, ಸಾವಿತ್ರಿ ನಾಯಕ, ನಾಗರತ್ನಾ ನವಲೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next