Advertisement

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

12:00 AM Sep 30, 2024 | Team Udayavani |

ಬೆಂಗಳೂರು: ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ಹಳೆಯ ವಲಯವಾರು ಮಾದರಿಗೆ (ಝೋನಲ್‌ ಫಾರ್ಮೇಟ್‌) ಮರಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದದ್ದಾಗಿ ವರದಿಯಾಗಿದೆ.

Advertisement

ಈ ಹಿಂದೆ 6 ವಲಯಗಳ ನಡುವೆ ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿತ್ತು. ಇವುಗಳೆಂದರೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಮಧ್ಯ ಮತ್ತು ಈಶಾನ್ಯ ವಲಯ. ಆದರೆ ಈ ಬಾರಿ ಇಂಡಿಯಾ ಎ, ಬಿ, ಸಿ, ಡಿ ಎಂಬ 4 ತಂಡಗಳ ನಡುವೆ ಈ ಪಂದ್ಯಾವಳಿಯನ್ನು ಆಡಲಾಯಿತು.

“ಈ ವರ್ಷದ ಮಾದರಿಯಿಂದ ಆಯಾ ವಲಯದ ಆಟಗಾರರಿಗೆ ನ್ಯಾಯಯುತ ಪ್ರಾತಿನಿಧ್ಯ ಲಭಿಸುವುದಿಲ್ಲ ಎಂದ ರಾಜ್ಯ ಕ್ರಿಕೆಟ್‌ ಘಟಕಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಹಿಂದಿನ ಸಾಂಪ್ರದಾಯಿಕ ವಲಯವಾರು ಮಾದರಿಯಲ್ಲಿ ಆಯಾ ವಲಯದ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಲಭಿಸುತ್ತಿತ್ತು ಎಂದಿವೆ. ಹೀಗಾಗಿ ರವಿವಾರದ ಸಭೆಯಲ್ಲಿ ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯನ್ನು ಹಳೆಯ ಮಾದರಿಯಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯಿತು’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಜಯ್‌ ಶಾ ಸ್ಥಾನಕ್ಕೆ ಯಾರು?
ಇದೇ ವೇಳೆ ಬಿಸಿಸಿಐ ನೂತನ ಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಜಯ್‌ ಶಾಗೆ ವಿನಂತಿಸಲಾಗಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ದಿಲ್ಲಿ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರೋಹನ್‌ ಜೇಟ್ಲಿ , ಬಿಸಿಸಿಐ ಖಜಾಂಚಿ ಆಶೀಷ್‌ ಶೆಲಾರ್‌, ಜಂಟಿ ಕಾರ್ಯದರ್ಶಿ ದೇವಜಿತ್‌ ಸೈಕಿಯಾ, ಗುಜರಾತ್‌ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಅನಿಲ್‌ ಪಟೇಲ್‌ ಅವರು ಜಯ್‌ ಶಾ ಉತ್ತರಾಧಿಕಾರಿಗಯಾಗಲು ಪೈಪೋಟಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next