Advertisement

ವಿರೂಪಾಪೂರಗಡ್ಡಿ ಅಮಲು ಪದಾರ್ಥ ಮಾರಾಟ : ವ್ಯಕ್ತಿ ಬಂಧನ

09:40 AM Oct 29, 2019 | sudhir |

ಗಂಗಾವತಿ: ತಾಲೂಕಿನ ವಿರೂಪಾಪೂರಗಡ್ಡಿ ಯಲ್ಲಿ ಪ್ರವಾಸಿಗರಿಗೆ ಮತ್ತು ಬರಿಸುವ ಸಮುದ್ರ ಬಾಳೆಬೀಜ ಹಾಗೂ ಗಾಂಜಾ ಮಾರುತ್ತಿದ್ದವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

Advertisement

ಬಂಧಿತನನ್ನು ವಿರೂಪಾಪೂರಗಡ್ಡಿಯ ನಿವಾಸಿ ಪಂಪಾಪತಿ ತಂ ಅರಳಪ್ಪ(35) ಎಂದು ಗುರುತಿಸಲಾಗಿದೆ. ಈತನಿಂದ ಪ್ರವಾಸಿಗರು ಮತ್ತು ಟೆಕ್ಕಿಗಳಿಗೆ ಮಾರಾಟ ಮಾಡಲು ಸಂಗ್ರಹಿಸಿದ್ದ 57 ಗ್ರಾಂ ಸಮುದ್ರ ಬಾಳೆ ಎಲೆ ಬೀಜ ಹಾಗೂ 172 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಎದುರು ಪಂಚನಾಮೆ ಮಾಡಿದ್ದಾರೆ.

ಡಿವೈಎಸ್ಪಿ ಡಾ.ಚಂದ್ರಶೇಖರ ಸಿಪಿಐ ಸುರೇಶ್ ತಳವಾರ ಪಿಎಸ್ಐ ಜೆ.ದೊಡ್ಡಪ್ಪ ದಾಳಿಯ ನೇತೃತ್ವ ವಹಿಸಿದ್ದರು.

ಆನೆಗೊಂದಿ ವಿರೂಪಾಪೂರಗಡ್ಡಿ ಸಾಣಾಪೂರ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ಭರಿಸುವ ಸಮುದ್ರ ಬಾಳೆಬೀಜ ಮಾರಾಟ ದಂಧೆ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕರಟವಾಗಿತ್ತು. ವಿದೇಶಿ ಪ್ರವಾಸಿಗರು ಹೆಚ್ಚಾಗಿ ಇಲ್ಲಿಗೆ ಬರುತ್ತಿರುವುದರಿಂದ ಗಾಂಜಾ ಸಮುದ್ರ ಬಾಳೆಬೀಜದ ಮಾರಾಟ ವ್ಯಾಪಕವಾಗಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next