Advertisement

ಡ್ರಗ್ಸ್‌ ತಡೆಗೆ ಕ್ರಿಯಾ ಯೋಜನೆ ರೂಪಿಸಿ

09:45 AM Jul 23, 2018 | |

ಮಾದಕ ವಸ್ತುಗಳ ನಿಯಂತ್ರಣಕ್ಕೆ ಅಗತ್ಯ ಕಾರ್ಯತಂತ್ರ ತರಲು ಆದೇಶ
ಶಾಲಾ ಮಕ್ಕಳ ಮೇಲೆ ಡ್ರಗ್ಸ್‌ ಪ್ರಭಾವದ ಬಗ್ಗೆ ಸುಪ್ರೀಂ ಕಳವಳ

Advertisement

ಹೊಸದಿಲ್ಲಿ: ದೇಶದಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ತುರ್ತಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ತರುವಂತೆ ದೇಶದ ಪ್ರತಿಷ್ಠಿತ ಆಸ್ಪತ್ರೆ ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಗೆ ಸೂಚನೆ ನೀಡಿದೆ. ಸೆ.7ರೊಳಗೆ ಮಾದಕ ವ್ಯಸನ ನಿಯಂ ತ್ರಣ ಸಂಬಂಧ ವರದಿ ನೀಡಲೇಬೇಕು. ಜತೆಗೆ ಈಗ ನೀಡಲಾ ಗಿರುವ ಅವಧಿಯನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಮುಖ್ಯ ನ್ಯಾ| ದೀಪಕ್‌ ಮಿಶ್ರಾ, ನೇತೃತ್ವದ ಪೀಠ ಆದೇಶ ನೀಡಿದೆ. ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮನೀಂದರ್‌ ಸಿಂಗ್‌ ಅವರಿಗೆ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಕೇಂದ್ರ ಸರಕಾರ ಮತ್ತು ಏಮ್ಸ್‌ ಪಾಲಿಸಲೇಬೇಕು ಎಂದು ಹೇಳಿದೆ. ಇದನ್ನು ರಾಷ್ಟ್ರೀಯ ಮಹತ್ವದ ವಿಚಾರ ಎಂದು ಪರಿಗಣಿಸಿ ಅಗತ್ಯ ಕಾರ್ಯಸೂಚಿ ತನ್ನಿ ಎಂದಿದೆ. ಮನೀಂದರ್‌ ಸಿಂಗ್‌ ಹೇಳಿಕೆ ಯಂತೆ ನಾವೀಗ ಏಮ್ಸ್‌ನ ಉನ್ನತಾಧಿಕಾರ ಸಮಿತಿಯು ಸೆ.7 ಅಥವಾ ಅದಕ್ಕೂ ಮುನ್ನವೇ ಡ್ರಗ್ಸ್‌ ವ್ಯಸನ ಸಮಸ್ಯೆ ಮುಕ್ತ ಮಾಡುವ ವರದಿ ಅಂತಿಮಗೊಳಿಸಬೇಕು ಎಂದು ಪೀಠ ಹೇಳಿದೆ.

2016ರಲ್ಲೇ ಸುಪ್ರೀಂಕೋರ್ಟ್‌ ಡ್ರಗ್ಸ್‌ ವ್ಯಸನ ನಿಯಂತ್ರಣಕ್ಕಾಗಿ ಅಗತ್ಯ ಮಾರ್ಗಸೂಚಿ ತರುವಂತೆ ಕೇಂದ್ರಕ್ಕೆ ಸೂಚಿಸಿ ತೀರ್ಪು ನೀಡಿತ್ತು.  ಇನ್ನಾರು ತಿಂಗಳಲ್ಲಿ ಮಾದಕ ವ್ಯಸನ ಉಂಟು ಮಾಡುವ ವಸ್ತುಗಳನ್ನು ಗುರುತಿಸಬೇಕು. ಇದರ ತಡೆಗೆ ಅಗತ್ಯ ಮಾರ್ಗಸೂಚಿ ತರಬೇಕು ಎಂದಿತ್ತು. ಆದರೆ ಇದುವರೆಗೆ ಈ  ತೀರ್ಪು ಪಾಲನೆಯಾಗಿಲ್ಲ ಎಂದು ನೊಬೆಲ್‌ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅವರ ಎನ್‌ಜಿಓ ಬಚ್‌ಪನ್‌ ಬಚಾವೋ ಆಂದೋಲನ ಸಂಸ್ಥೆ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಇಂದಿನ ಆದೇಶವನ್ನು ಏಮ್ಸ್‌ನ ನಿರ್ದೇಶಕರಿಗೂ ನೀಡಿ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರ ಜತೆ ಸೇರಿ ಸೆ.7ರ ಒಳಗೆ ವರದಿ ಅಂತಿಮ ಮಾಡಲಿ ಎಂದು ಸುಪ್ರೀಂ ಸೂಚನೆ ನೀಡಿದೆ. ಇದರ ಜತೆಗೆ ಡ್ರಗ್ಸ್‌ ಕುರಿತಂತೆ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಹಾಗೂ ಎಲ್ಲ ರಾಜ್ಯ ಸರಕಾರಗಳು ಶಾಲಾ ಪಠ್ಯಕ್ರಮದಲ್ಲೂ ಡ್ರಗ್ಸ್‌ ಸೇವನೆಯ ಅಪಾಯದ ಬಗ್ಗೆ ಸೇರಿಸಬೇಕು ಎಂದು ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next