Advertisement
ತ್ರಿಪುರದ ಮಂದೀಪ್ ರೈ (40), ಮಿರ್ನಲ್ ಕಾಂತಿ ದೇವನಾಥ್ (33) ಮತ್ತು ಪ್ರಸನ್ ಜೀತ್ ದತ್ತ (23) ಬಂಧಿತರು. ಇವರಿಂದ 11 ಕೆ.ಜಿ. 200 ಗ್ರಾಂ ತೂಕದ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕೆಲ ವರ್ಷಗಳಿಂದ ಈಶಾನ್ಯ ರಾಜ್ಯದ ನಿವಾಸಿಗಳಿಗೆ ಗಾಂಜಾ ಪೂರೈಸುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
Related Articles
Advertisement
ಒಂದು ವಾರದ ಹಿಂದೆ ಹೋಟೆಲ್ ಸಿಬ್ಬಂದಿ ವೈಯಕ್ತಿಕ ವಿಚಾರವಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ಮಾಹಿತಿ ಪಡೆದ ತಿಲಕನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಹೋಟೆಲ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ. ಈ ಪೈಕೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದರು.
ಹೋಟೆಲ್ನಲ್ಲಿ ವಾಸ್ತವ್ಯ: ಆರೋಪಿ ಮಂದೀಪ್ ರೈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೇ ವೇಳೆ ಮಿರ್ನಲ್ ಕಾಂತಿ ದೇವನಾಥ್ ಮತ್ತು ಪ್ರಸನ್ ಜೀತ್ ದತ್ತ ತ್ರಿಪುರದಿಂದ 10 ಕೆ.ಜಿ.ಗಾಂಜಾವನ್ನು ನಗರಕ್ಕೆ ತಂದಿದ್ದು, ಹೋಟೆಲ್ವೊಂದರಲ್ಲಿ ತಂಗಿದ್ದರು. ಈ ಮಾಹಿತಿ ಪಡೆದು ಮಂದೀಪ್ ರೈನನ್ನು ಹೋಟೆಲ್ಗೆ ಕರೆದೊಯ್ದು ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸಲಾಗಿದೆ.
30-40 ಸಾವಿರಕ್ಕೆ ಮಾರಾಟ: ಪ್ರತಿ ಕೆ.ಜಿ.ಗಾಂಜಾಗೆ 10ರಿಂದ 15 ಸಾವಿರ ರೂ.ಗೆ ಖರೀದಿ ಮಾಡುತ್ತಿದ್ದ ಮಂದೀಪ್ ರೈ 30-40 ಸಾವಿರ ರೂ. ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಐಷಾರಾಮಿ ಜೀವನದ ಜತೆಗೆ ಹೊಸ ಹೋಟೆಲ್ ನಡೆಸಲು ಸಿದ್ಧತೆ ನಡೆಸಿದ್ದ ಎಂದು ಪೊಲೀಸರು ಹೇಳಿದರು.