Advertisement
ಬಸ್ ಉಡುಪಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕ ತೀರ್ಥಹಳ್ಳಿ ತಾಲೂಕಿನ ಕೂಳೂರಿನ ಶ್ರೀಕಂಠ (55) ಮೃತಪಟ್ಟವರು. ಗಾಯಾಳು ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ವೇಗವಾಗಿ ಚಲಿಸುತ್ತಿದ್ದ ಬಸ್ ಗುಡ್ಡೆಕೇರಿ ಬಳಿಯ ಪದ್ಮನಾಭ ಮಂಜರ್ ಅವರ ಅಂಗಡಿಗೆ ನುಗ್ಗಿ ಬಳಿಕ ಪಕ್ಕದಲ್ಲಿರುವ ಜೆ.ಎಸ್. ಹೆಗ್ಡೆ ಅವರ ಮನೆಯ ಕಾಂಪೌಂಡ್ಗೆ ನುಗ್ಗಿದೆ. ಅಂಗಡಿ ಸಂಪೂರ್ಣ ಜಖಂಗೊಂಡಿದೆ.
ಚಾಲಕ ಶ್ರೀಕಂಠ ಅವರು ಮಧ್ಯಾಹ್ನ ಆಗುಂಬೆಯ ಹೊಟೇಲೊಂದರಲ್ಲಿ ಊಟ ಮಾಡುತ್ತಿದ್ದಾಗ ಎದೆನೋವು ಎಂದು ಊಟ ಬಿಟ್ಟಿದ್ದರು. ಎದೆ ನೋವಿನ ತೀವ್ರತೆಯಿಂದ ಹೃದಯಾಘಾತವಾಗಿ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.