Advertisement

ಬೆಳ್ತಂಗಡಿಯಲ್ಲಿ ಬಸ್‌-ಟ್ಯಾಂಕರ್‌ ಅಪಘಾತ: ತಪ್ಪಿದ ಭಾರೀ ಅನಾಹುತ, 20 ಮಂದಿಗೆ ಗಾಯ

06:18 PM May 09, 2024 | Team Udayavani |

ಬೆಳ್ತಂಗಡಿ: ಪೇಟೆಯ ಅಯ್ಯಪ್ಪ ಗುಡಿ ಸಮೀಪ ಬುಧವಾರ ಮಧ್ಯಾಹ್ನ 12.45ಕ್ಕೆ ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್‌ಗೆ ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆ ಸಾಗುವ ಟ್ಯಾಂಕರ್‌ ಲಾರಿ ಢಿಕ್ಕಿ ಹೊಡೆದ ಪರಿಣಾಮ 20 ಮಂದಿ ಗಾಯಗೊಂಡಿದ್ದಾರೆ.

Advertisement

ಬಸ್‌ ಚಾಲಕ ಅರುಣ್‌ ಕುಮಾರ್‌ (26), ನಿರ್ವಾಹಕ ಅಬೂಬಕ್ಕರ್‌ (39), ಟ್ಯಾಂಕರ್‌ ಚಾಲಕ ಸುಂದರ ಗೌಡ (58), ಪ್ರಯಾಣಿಕರಾದ ಕಾರ್ತಿಕ್‌ (19), ಅಬ್ದುಲ್‌ ರಹಿಮಾನ್‌ (48), ಯಶೋದಾ (35), ವಿಜಯಾ (23), ವಾಸಂತಿ (54), ಪ್ರೀತಿ (21), ಮಮತಾ (30), ಮಮತಾ (21), ವಾಸಂತಿ (55), ಕಲ್ಯಾಣಿ (55), ಪದ್ಮಾವತಿ (37), ರಾಘವೇಂದ್ರ (36), ನಾರಾಯಣ ಕುಲಾಲ್‌ (40), ನಾಗೇಶ್‌ ಹೆಗ್ಡೆ (63), ಶಾಮೀನ (35), ಶೈಮಾ (15), ನಾರಾಯಣ ನಾಯ್ಕ (45) ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಢಿಕ್ಕಿಯ ರಭಸಕ್ಕೆ ಬಸ್‌ 10 ಮೀಟರ್‌ ಹಿಂದಕ್ಕೆ ಸಂಚರಿಸಿ ರಸ್ತೆಗೆ ಅಡ್ಡಲಾಗಿ ನಿಂತಿದ್ದು, ಹಿಂಬದಿಯಿದ್ದ ರಿಕ್ಷಾಕ್ಕೂ ಢಿಕ್ಕಿಯಾಗಿದೆ. ಬಸ್‌ ಚಾಲಕ ಅರುಣ್‌ ಕುಮಾರ್‌ ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next