Advertisement

ಪಾಕಿಸ್ಥಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಹತ್ಯೆಗೈದ ಚಾಲಕನ ಬಂಧನ

02:10 PM Mar 09, 2023 | Team Udayavani |

ಇಸ್ಲಾಮಾಬಾದ್: ಪಾಕಿಸ್ಥಾನದ ಹೈದರಾಬಾದ್‌ನಲ್ಲಿ ವೈದ್ಯರಾಗಿದ್ದ ಧರಮ್ ದೇವ್ ರಾಠಿ ಅವರನ್ನು ಮಂಗಳವಾರ ಅವರ ಮನೆಯೊಳಗೆ ಅವರ ಚಾಲಕ ಚಾಕುವಿನಿಂದ ವೈದ್ಯರ ಕತ್ತು ಸೀಳಿ ಕೊಂದಿದ್ದಾನೆ ಎಂದು ಪೊಲೀಸರು ಸುದ್ದಿವಾಹಿನಿ ದಿ ನೇಷನ್‌ಗೆ ತಿಳಿಸಿದ್ದಾರೆ.

Advertisement

ಆರೋಪಿ ಚಾಲಕನನ್ನು ಬುಧವಾರ ಖೈರ್‌ಪುರದ ಆತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹನೀಫ್ ಲೆಘರಿ ಎಂದು ಗುರುತಿಸಲಾಗಿದೆ.

ಮನೆಗೆ ಹೋಗುವಾಗ ಇಬ್ಬರ ನಡುವೆ ಜಗಳವಾಗಿದೆ ಎಂದು ವೈದ್ಯರ ಅಡುಗೆಯ ಕೆಲಸದ ಆಳು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲಿಗೆ ತಲುಪಿದ ಚಾಲಕ ಅಡುಗೆ ಮನೆಯೊಳಗಿಂದ ಚಾಕು ತೆಗೆದುಕೊಂಡು ಮನೆಯಲ್ಲೇ ವೈದ್ಯನನ್ನು ಕೊಂದಿದ್ದಾನೆ. ನಂತರ ಚಾಲಕ ಸ್ಥಳದಿಂದ ವೈದ್ಯರ ಕಾರಿನಲ್ಲೇ ಪರಾರಿಯಾಗಿದ್ದಾನೆ.

ಡಾ.ಧರಮ್ ದೇವ್ ರಾಠಿ ಅವರು ಹೈದರಾಬಾದ್ ಪ್ರದೇಶದಲ್ಲಿ ಪ್ರಸಿದ್ಧ ಚರ್ಮರೋಗ ವೈದ್ಯರಾಗಿದ್ದರು ಎಂದು ದಿ ನೇಷನ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next