Advertisement

ಅಪ್ಪಾಜಿ ಸಂಚಾರಿ ಕ್ಯಾಂಟೀನ್‌ಗೆ ಚಾಲನೆ

12:04 PM May 21, 2019 | pallavi |

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 87ನೇ ಹುಟ್ಟು ಹಬ್ಬದ ಪ್ರಯುಕ್ತ ‘ದೇವೇಗೌಡ ಅಪ್ಪಾಜಿ ಸಂಚಾರಿ ಕ್ಯಾಂಟೀನ್‌’ಗೆ ಸ್ವತಃ ಎಚ್.ಡಿ.ದೇವೇಗೌಡರು ಚಾಲನೆ ನೀಡಿದರು. ಕ್ಯಾಂಟೀನ್‌ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ, ಬಡ ವರ್ಗದ ಜನರಿಗೆ ಅತ್ಯಂತ ಶುಚಿ ಮತ್ತು ರುಚಿಕರವಾದ ಹಾರವನ್ನು ಕಡಿಮೆ ದರದಲ್ಲಿ ನೀಡುವುದು ಈ ಸಂಚಾರಿ ಕ್ಯಾಂಟೀನ್‌ ಆರಂಭದ ಹಿಂದಿನ ಉದ್ದೇಶವಾಗಿದೆ.

Advertisement

ಬೆಂಗಳೂರು ನಗರದ ವ್ಯಾಪ್ತಿಯ ವಿವಿಧ ಭಾಗದಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವನ್ನು ಈ ಸಂಚಾರಿ ಕ್ಯಾಂಟೀನ್‌ ಒದಗಿಸಲಿದೆ. ಇದು ಟಿ.ಎ.ಶರವಣ ಅವರು ಸಂಕಲ್ಪವಾಗಿದೆ. ಅವರ ಕಾರ್ಯಕ್ಕೆ ನಾನು ಶುಭ ಹಾರೈಸುತ್ತೇನೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next