Advertisement

ಕೊಂಬೆ ಸವರುವ ಕಾಮಗಾರಿಗೆ ಚಾಲನೆ

03:57 PM Dec 15, 2019 | Team Udayavani |

ಬಾಗಲಕೋಟೆ: ತಾಲೂಕಿನ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನವನಗರದ ಯುನಿಟ್‌-1ರಲ್ಲಿಯ ಮುಖ್ಯ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಮತ್ತು ಬೀದಿ ಬದಿ ದೀಪಗಳಿಗೆ ಅಡತಡೆ ಉಂಟು ಮಾಡುವ ಮರ ಹಾಗೂ ಕೊಂಬೆ ಸವರುವ ಕಾಮಗಾರಿಗೆ ಶಾಸಕ ಡಾ|ವೀರಣ್ಣ ಚರಂತಿಮಠ ಚಾಲನೆ ನೀಡಿದರು.

Advertisement

ಶನಿವಾರ ನವನಗರದ ಸೆಕ್ಟರ್‌ ನಂ. 43ರಲ್ಲಿ ಮರದ ಕೊಂಬೆಗಳ ಸವರುವ ಕಾಮಗಾರಿಗೆ ಚಾಲನೆ ಮಾತನಾಡಿದ ಅವರು, ತಾಲೂಕಿನ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಮತ್ತು ಕೃಷ್ಣ ಭಾಗ್ಯಜಲ ನಿಗಮ ನಿಯಮಿತ ಅರಣ್ಯ ವಿಭಾಗದ ಸಹಯೋಗದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. 60.64 ಲಕ್ಷ ರೂ.ಗಳಿಗೆ ಟೆಂಡರ್‌ ನೀಡಲಾಗಿದ್ದು, ಗುತ್ತಿಗೆದಾರರು ನಿಗದಿತ ಅವಧಿಯೊಳಗಾಗಿ ಮರದ ಕೊಂಬೆ ಸವರುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ನಾಗರತ್ನ ಹೆಬ್ಬಳ್ಳಿ, ಶಾಂತಾ ಹನಮಕ್ಕನವರ, ಬಿಟಿಡಿಎ ಮುಖ್ಯ ಎಂಜಿನಿಯರ್‌ ವಾಸನದ, ಮಾಜಿ ಬಿಟಿಡಿಎ ಅಧ್ಯಕ್ಷ ಜಿ.ಎನ್‌. ಪಾಟೀಲ, ಭಾಗೀರತಿ ಪಾಟೀಲ, ಬಸವರಾಜ ಹೆಬ್ಬಳ್ಳಿ, ರಾಜು ಗೌಳಿ, ಶಂಕರ ಕೆಂಚನ್ನವರ, ರಾಜು ರೆವಣಕರ, ರಾಜು ನಾಯಕರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next