Advertisement

ರಾಮರಾಜ್ಯ ರಥಯಾತ್ರೆಗೆ ಚಾಲನೆ

09:26 AM Feb 14, 2018 | Team Udayavani |

ಲಕ್ನೋ: ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್‌(ಎಂಆರ್‌ಎಂ) ಹಮ್ಮಿಕೊಂಡಿರುವ ರಾಮರಾಜ್ಯ ರಥಯಾತ್ರೆಗೆ ಅಯೋಧ್ಯೆಯಲ್ಲಿ ಮಂಗಳ ವಾರ ಚಾಲನೆ ಸಿಕ್ಕಿದೆ. 2019ರ ಲೋಕ ಸಭೆ ಚುನಾವಣೆಗೆ ಮೊದಲೇ ರಾಮ ಮಂದಿರ ಆಂದೋಲನವನ್ನು ಪುನರೂರ್ಜಿತಗೊಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂವಿವಾದದ ವಿಚಾರಣೆಯು ಕೊನೆಯ ಹಂತದಲ್ಲಿ ರುವಾಗಲೇ ಈ ಯಾತ್ರೆ ಆರಂಭವಾಗಿದೆ.

Advertisement

ಅಯೋಧ್ಯೆಯಿಂದ ರಾಮೇಶ್ವರಂವರೆಗೆ ರಥಯಾತ್ರೆ ಸಾಗಲಿದ್ದು, ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಸಂಚರಿಸಲಿವೆ. ಒಟ್ಟು 41 ದಿನಗಳ ಕಾಲ ನಡೆಯಲಿರುವ ಯಾತ್ರೆ ಮಾ.23ಕ್ಕೆ ಸಮಾಪ್ತಿಯಾಗಲಿದೆ. 1990ರ ದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಕಂಬಗಳನ್ನು ಕೆತ್ತಲೆಂದು ವಿಎಚ್‌ಪಿ ಅಯೋಧ್ಯೆಯಲ್ಲಿ ಕರಸೇವಕಪುರಂ ಎಂಬ ವರ್ಕ್‌ಶಾಪ್‌ವೊಂದನ್ನು ತೆರೆದಿದ್ದು, ಅಲ್ಲೇ ಯಾತ್ರೆಗೆ ಚಾಲನೆ ನೀಡಿರುವುದು ವಿಶೇಷ.

6 ರಾಜ್ಯಗಳಲ್ಲಿ ಸಂಚಾರ: ಟಾಟಾ ಮಿನಿ ಟ್ರಕ್‌ಗೆ ಸಿಂಗಾರ ಮಾಡಿ ರಥವಾಗಿ ಮಾರ್ಪಡಿಸಲಾಗಿದೆ. ಇದು ಬಿಜೆಪಿ ಆಡಳಿತದಲ್ಲಿರುವ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಸಂಚರಿಸಿ, ಅನಂತರ ಕರ್ನಾಟಕ ತಲುಪಲಿದೆ. ಬಳಿಕ ಕೇರಳಕ್ಕೆ ತೆರಳಿ, ಅಲ್ಲಿಂದ ತಮಿಳುನಾಡಿನ ರಾಮೇಶ್ವರಂನಲ್ಲಿ ಯಾತ್ರೆ ಸಮಾಪ್ತಿಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next