Advertisement

ಜೀವನಿ 2020-21 ಮನೆಮನೆಯಲ್ಲೂ ಜೈವಿಕ ಕೃಷಿಗೆ ಚಾಲನೆ

01:36 AM Feb 15, 2020 | sudhir |

ಬದಿಯಡ್ಕ: ಆರೋಗ್ಯವಂತ ಬದುಕಿಗಾಗಿ ಆರೋಗ್ಯಪೂರ್ಣ ಆಹಾರ ಸೇವನೆ ಅತೀ ಅಗತ್ಯ. ದೆ„ಹಿಕ ಆರೋ ಗ್ಯದ ಮೇಲೆ ಸೇವಿಸುವ ಆಹಾರ ಬೀರುವ ಪರಿಣಾಮವನ್ನು ಮನಗಂಡು ರೋಗಮುಕ್ತ, ನೆಮ್ಮದಿಯ ಜೀವನಕ್ಕಾಗಿ ವಿಷಮುಕ್ತ ವಸ್ತುಗಳನ್ನು ಅಡುಗೆಯಲ್ಲಿ ಬಳಸಬೇಕು. ಆದರೆ ಹಣಗಳಿಕೆಯೊಂದೇ ಉದ್ದೇಶವಾಗಿರುವ ಮಾರುಕಟ್ಟೆಯಲ್ಲಿ ಧಾರಾಳ ರಾಸಾಯನಿಕಗಳನ್ನು ಬಳಸಿ ಬೆಳೆಸಿದ ತರಕಾರಿಗಳು ಮತ್ತಿತರ ಆಹಾರ ಪದಾರ್ಥಗಳು ಸುಲಭವಾಗಿ ಲಭಿಸುತ್ತಿವೆ. ಅವುಗಳ ಸೇವೆನೆಯಿಂದ ಜನರ ಆರೋಗ್ಯ ಮತ್ತು ಆಯುಷ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

Advertisement

ಈ ಸಮಸ್ಯೆ ಹೋಗಲಾಡಿಸಿ ಜನರನ್ನು ಎಚ್ಚರಿಸುವ ನಿಟ್ಟಿನಲ್ಲಿ ಸರಕಾರ ಜೀವನಿ 2020-21, ನಮ್ಮ ಕೃಷಿ ನಮ್ಮ ಆರೋಗ್ಯ ಎಂಬ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸಿದೆ. ಆದರೆ ಬದಿಯಡ್ಕ ಪಂಚಾಯತ್‌ ಈ ಯೋಜನೆಯನ್ನು ಮನೆಮನೆಗಳಿಗೂ ತಲುಪುವ ಉದ್ದೇಶದಿಂದ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇರಳ ರಾಜ್ಯ ಕೃಷಿ ಇಲಾಖೆಯು ಮೊದಲ ಹಂತದಲ್ಲಿ ಜನಪ್ರತಿನಿಧಿಗಳ ಮತ್ತು ಪತ್ರಕರ್ತರ ಮನೆಗಳಲ್ಲಿ ಈ ಪದ್ಧತಿಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದೆ.

ಆ ನಿಟ್ಟಿನಲ್ಲಿ ಬದಿಯಡ್ಕ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಅವರ ನಿವಾಸದಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್‌ ಅವರ ಉಪಸ್ಥಿತಿಯಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಯೋಜನೆಗೆ ಚಾಲನೆ ನೀಡಲಾಯಿತು.

ಕುಟುಂಬಶ್ರೀ ಬೆಂಬಲ
ಬದಿಯಡ್ಕ ಕೃಷಿ ಇಲಾಖೆಯ ಸಹಕಾರದೊಂದಿಗೆ ಬದಿಯಡ್ಕ ಪಂಚಾಯತ್‌ ನೇತƒತ್ವದಲ್ಲಿ ಮನೆಮನೆಯಲ್ಲೂ ಜೈವಿಕ ಕೃಷಿ ಬೆಳೆಸುವ ಈ ಸತ್ಕಾರ್ಯಕ್ಕೆ ಬೆಂಬಲ ಸೂಚಿಸಿದ್ದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಅಗತ್ಯವಿರುವ ತರಕಾರಿ ಬೆಳೆಯುವ ಭರವಸೆ ನೀಡಿದ್ದಾರೆ. ಆರೋಗ್ಯವನ್ನು ಸಂರಕ್ಷಿಸುವ ಪದ್ಧತಿಗಳು ಈ ಕಾಲಘಟ್ಟದಲ್ಲಿ ಅತೀ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿ ಮತ್ತು ಪತ್ರಕರ್ತರ ಮನೆಗಳಲ್ಲಿ ಜೀವನಿ ಮೊದಲ ಹಂತದ ಜೀವನಿ ಯೋಜನೆಯಲ್ಲಿ ಜನಪ್ರತಿನಿಧಿಗಳ ಹಾಗೂ ಪತ್ರಕರ್ತರ ಮನೆಗಳಲ್ಲಿ ಜೈವಿಕ ತರಕಾರಿ ಬೆಳೆಯುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ. ಜನರಿಗೆ ಈ ಪದ್ಧತಿಯ ಬಗ್ಗೆ ವಿಶ್ವಾಸ ಹಾಗೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಮಾದರಿಯಾಗಿ ಈ ಹೆಜ್ಜೆ.

Advertisement

420 ದಿವಸಗಳ ಬೃಹತ್‌ ಪದ್ಧತಿ
ಜೀವನಿ 2020-21 ಪದ್ಧತಿಯು 1-1-2020 ರಿಂದ 2021 ವಿಷು ಹಬ್ಬದ ವರೆಗಿನ 420 ದಿನಗಳ ಬƒಹತ್‌ ಪದ್ಧತಿಯಾಗಿದ್ದು 2021ರ ವಿಷು ಹಬ್ಬಕ್ಕಾಗುವಾಗ ಕೇರಳದ ಮನೆಮನೆಗಳಲ್ಲೂ ಜೈವಿಕವಾಗಿ ಬೆಳೆದ ತರಕಾರಿ ಲಭ್ಯವಾಗುವಂತೆ ಮಾಡುವುದೇ ಇದರ ಉದ್ಧೇಶವಾಗಿದೆ. ಈ ರೀತಿ ಕೃಷಿ ಮಾಡುವ ಮೂಲಕ ಶುದ್ಧ ಗಾಳಿಯನ್ನು ಉಸಿರಾಡುವುದೂ ಸಾಧ್ಯಾವಾಗುತ್ತದೆ. ಆ ಮೂಲಕ ಆರೋಗ್ಯ ಸಂರಕ್ಷಣೆಯ ಕೆಲಸ ಸುಲಭವಾಗುತ್ತದೆ ಎಂಬ ದೂರದೃಷ್ಠಿಯ್ನು ಕೃಷಿ ಇಲಾಖೆ ಹೊಂದಿದೆ.

ಉಪಯುಕ್ತ ಯೋಜನೆ
ಕೃಷಿಗೆ ಪ್ರೋತ್ಸಾಹ ನೀಡುವ ಈ ಪದ್ಧತಿ ಜನರನ್ನು ಜಾಗƒತರನ್ನಾಗಿಸುತ್ತದೆ. ಆರೋಗ್ಯವಂತ ಸಮಾಜಕ್ಕಾಗಿ ಈಗ ಪ್ರಯತ್ನಿಸದಿದ್ದರೆ ಮುಂದೆ ಜನರ ಆರೋಗ್ಯ ಮತ್ತು ಆಯುಸ್ಸು ಎರಡೂ ಕಡಿಮೆಯಾಗುತ್ತದೆ. ಆದುದರಿಂದ ಕೃಷಿ ಇಲಾಖೆ ಫಲಪ್ರದವಾದ, ಉಪಯುಕ್ತವಾದ ಹಲವಾರು ಯೋಜನೆಗಳನ್ನು ಹೊರತರುತ್ತಿದೆ.
– ಮೋಹನನ್‌, ಸಹಾಯಕ ಕೃಷಿ ಅಧಿಕಾರಿ, ಬದಿಯಡ್ಕ ಕೃಷಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next