Advertisement

ಜಿಲ್ಲಾಮಟ್ಟದ ವೈಯಕ್ತಿಕ ಆಟಗಳ ಕ್ರೀಡಾಕೂಟಕ್ಕೆ  ಚಾಲನೆ 

04:33 PM Sep 27, 2018 | Team Udayavani |

ಗದಗ: ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 2018-19ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾಮಟ್ಟದ ವೈಯಕ್ತಿಕ ಆಟಗಳ ಕ್ರೀಡಾಕೂಟ ನಡೆಯಿತು.

Advertisement

ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ, ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಹೆಚ್ಚು-ಹೆಚ್ಚಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿತುಕೊಂಡು, ಕ್ರೀಡಾ ನಿಯಮಗಳಿಗೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಿಸ್ತಿನ ಆಟದೊಂದಿಗೆ ಗೆಲುವು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ ಮಾತನಾಡಿ, ತಾಪಂ ಉಪಾಧ್ಯಕ್ಷ ಎಸ್‌. ಬಿ. ಖಂಡೂ, ತಾಪಂ ಇಒ ಡಾ| ಎಚ್‌. ಎಸ್‌.ಜಿನಗಾ, ಗದಗ ಡಿಪಿಒ ಎನ್‌.ಎಸ್‌. ಅಂಗಡಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಸ್‌.ಎನ್‌. ಬಳ್ಳಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಜಿ. ಖೋಡೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌.ಎಂ. ಕೊಟಗಿ, ದೈಹಿಕ ಶಿಕ್ಷಣ ಅಭಿವೃದ್ಧಿ ಸಂಘದ ಅಧ್ಯಕ್ಷ ವೈ.ಕೆ. ಚೌಡಾಪೂರ, ಎಂ.ಎಸ್‌. ಕುಚಬಾಳ, ಅಧ್ಯಕ್ಷ ಪಿ.ಸಿ.ಕಲಹಾಳ, ಡಿ.ಎಸ್‌. ತಳವಾರ, ಎಂ.ವೈ. ತೇರದಾಳ, ಎಚ್‌.ಜಿ. ಕಾಂಬಳೆ, ಎಸ್‌.ಸಿ.ಬಾವಿ, ವಿ.ಎಫ್‌. ಕಲಕಂಬಿ, ಬಿ.ಎಫ್‌. ಪೂಜಾರ, ವಿ.ಸಿ. ಅಡಕೆ, ಎಸ್‌.ಬಿ. ಆಲೂರ, ಎಚ್‌.ಆರ್‌. ಕೋಣಿಮನಿ, ಪಿ.ಎಚ್‌. ಕಡಿವಾಲರ, ಬಿ.ಬಿ. ಹಡಪದ ಇದ್ದರು. ಎಂ.ಎಸ್‌. ಕುಚಬಾಳ ನಿರೂಪಿಸಿದರು. ವಿ.ಎ. ಸಜ್ಜನರ ಸ್ವಾಗತಿಸಿದರು. ಜೆ.ಬಿ. ಅಣ್ಣಿಗೇರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next