Advertisement

ನೋಯ್ಡಾ : ಮಹಾ ಪಾತಕಿ ಬಾಲರಾಜ್‌ ಭಾಟಿ ಎನ್‌ಕೌಂಟರ್‌ಗೆ ಬಲಿ

04:56 PM Apr 23, 2018 | Team Udayavani |

ನೋಯ್ಡಾ : ಉತ್ತರ ಪ್ರದೇಶ, ದಿಲ್ಲಿ ಮತ್ತು ಹರಿಯಾಣ – ಮೂರು ರಾಜ್ಯಗಳ STF ಪೊಲೀಸರು ಜಂಟಿಯಾಗಿ ನಡೆಸಿದ ಎನ್‌ಕೌಂಟರ್‌ನಲ್ಲಿ  ಮಹಾ ಪಾತಕಿ ಬಾಲರಾಜ್‌ ಭಾಟಿ ಇಂದು ಸೋಮವಾರ ಬೆಳಗ್ಗೆ ಹತನಾಗಿದ್ದಾನೆ.

Advertisement

ಈತನ ತಲೆಗೆ ಪೊಲೀಸರು ಈ ಹಿಂದೆ  2.5 ಲಕ್ಷ ರೂ. ಇನಾಮು ಘೋಷಿಸಿದ್ದರು. ಈತನ ಹತ್ಯೆ ಪೊಲೀಸ್‌ ಪಡೆಗೆ ದೊರಕಿರುವ ಭಾರೀ ಯಶಸ್ಸು ಎಂದು ತಿಳಿಯಲಾಗಿದೆ. 

ನೋಯ್ಡಾ ಸೆಕ್ಟರ್‌ 41ರಲ್ಲಿ ಪಾತಕಿ ಭಾಟಿ ದೊಡ್ಡ ಮಟ್ಟದ ದರೋಡೆಗೆ ಸ್ಕೆಚ್‌ ಹಾಕಿಕೊಂಡಿದ್ದ ಮಾಹಿತಿ ಪಡೆದಿದ್ದ ಪೊಲೀಸರ ಜಂಟಿ ತಂಡ ಅಲ್ಲಿಗೆ ಧಾವಿಸಿ ಕಟ್ಟೆಚ್ಚರ ಘೋಷಿಸಿ ಎಲ್ಲ ನಿರ್ಗಮನ ಮಾರ್ಗಗಳನ್ನು ಮುಚ್ಚಿದರು. ತನ್ನನ್ನು ಎಲ್ಲ ದಿಕ್ಕುಗಳಿಂದ ಪೊಲೀಸರು ಸುತ್ತುವರಿದಿರುವುದನ್ನು ಅರಿತ ಭಾಟಿ ಮತ್ತು ಆತನ ತಂಡದವರು ಪೊಲೀಸರ ಮೇಲೆ ಗುಂಡಿನ ದಾಳಿಗೆ ಮುಂದಾದರು. ಕೂಡಲೇ ಪೊಲೀಸರು ಗುಂಡಿನ ಉತ್ತರ ನೀಡಿದರು. 

ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡ ಭಾಟಿಯನ್ನು ಜಿಲ್ಲಾ ಆಸ್ಪತ್ರೆಗೆ ಒಯ್ದಾಗ ಆತ ಅದಾಗಲೇ ಮೃತಪಟ್ಟಿದ್ದುದಾಗಿ ವೈದ್ಯರು ಘೋಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next