Advertisement

ಡ್ರ್ಯಾಗನ್‌ ಬೋಟ್‌ ಚಾಂಪಿಯನ್‌ಶಿಪ್‌: ಕರ್ನಾಟಕ ಪ್ರಥಮ, ದಿಲ್ಲಿ ದ್ವಿತೀಯ

12:15 AM Feb 27, 2023 | Team Udayavani |

ಬ್ರಹ್ಮಾವರ: ಉಪ್ಪೂರು ಮಡಿಸಾಲು ನದಿಯಲ್ಲಿ ಫೆ. 23ರಿಂದ 26ರ ವರೆಗೆ ಆಯೋಜಿಸಲಾದ 11ನೇ ರಾಷ್ಟ್ರೀಯ ಮಟ್ಟದ ಡ್ರ್ಯಾಗನ್‌ ಬೋಟ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ ಮತ್ತು ದಿಲ್ಲಿ ತಂಡ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದೆ.

Advertisement

ರವಿವಾರ ಜಿಲ್ಲಾಡಳಿತ, ಜಿ.ಪಂ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ಕಯಾಕಿಂಗ್‌ ಮತ್ತು ಕನೂಯಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ನಡೆದ ಡ್ರ್ಯಾಗನ್‌ ಬೋಟ್‌ ಚಾಂಪಿಯನ್‌‌ಶಿಪ್‌ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಇಂತಹ ಕ್ರೀಡೆಗಳಿಗೆ ಬೆಂಗಳೂರಿ ಗಿಂತ ಕರಾವಳಿ ಪ್ರದೇಶ ಸೂಕ್ತ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯ ಪಟ್ಟರು.

ಉಡುಪಿ ಪರಿಸರದಲ್ಲಿ ತರಬೇತಿ ಕೇಂದ್ರವನ್ನು ತೆರೆದರೆ ಯುವಕರಿಗೆ ಬಹಳಷ್ಟು ಸಾಧನೆ ಮಾಡಲು ಸಾಧ್ಯ ಎಂದು ಪಂದ್ಯಾಟದ ರೂವಾರಿ, ಶಾಸಕ ಕೆ. ರಘುಪತಿ ಭಟ್‌ ಹೇಳಿದರು.
ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ, ಪಂದ್ಯಾಟದ ರೂವಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಕಯಾಕಿಂಗ್‌ ಅಸೋಸಿಯೇಶನ್‌ ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ ಕುಶ್ವಾ, ರಾಜ್ಯ ಅಧ್ಯಕ್ಷ ಮೇ|ಜ| ಎಂ.ಎನ್‌. ದೇವಯ್ಯ, ಕಾರ್ಯದರ್ಶಿ ದಿಲೀಪ್‌ ಕುಮಾರ್‌, ಭಾರತೀಯ ಡ್ರ್ಯಾಗನ್‌ ಬೋಟ್‌ ತಂಡದ ನಾಯಕ ಮಂಜೀತ್‌ ಸಿಂಗ್‌, ಪಂದ್ಯಾವಳಿ ಸ್ವಾಗತ ಸಮಿತಿ ಅಧ್ಯಕ್ಷ ಬಿರ್ತಿ ರಾಜೇಶ ಶೆಟ್ಟಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಉಪಸ್ಥಿತರಿದ್ದರು.

ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಕರ್ನಾಟಕ, ದಿಲ್ಲಿ, ಪಂಜಾಬ್‌, ಮಧ್ಯಪ್ರದೇಶ, ಗೋವಾ, ಹಿಮಾಚಲಪ್ರದೇಶ, ತಮಿಳುನಾಡು, ಕೇರಳ, ಹರ್ಯಾಣ, ರಾಜಸ್ಥಾನ, ಮಹಾರಾಷ್ಟ್ರ ಮೊದಲಾದ 16 ರಾಜ್ಯಗಳ ತಂಡಗಳು ಪಾಲ್ಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next