Advertisement

ಅಡಿಕೆ ಬೆಳೆಗಾರರ ಬಗ್ಗೆ ಸಂಸತ್ ಅಧಿವೇಶನದಲ್ಲಿ ಡಾ. ಹೆಗ್ಗಡೆ ಗಮನ

10:39 AM Dec 23, 2022 | Team Udayavani |

ಬೆಳ್ತಂಗಡಿ: ದೇಶದಲ್ಲಿ ಅಡಿಕೆ ಬೆಳೆಗಾರರು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವ ಹಿನ್ನೆಲೆ ದೇಶದ ಅಡಿಕೆ ಬೆಳೆಗಾರರ ಸಮಸ್ಯೆ ಡಿ.23 (ಇಂದು) ಸಂಸತ್ ಅದಿವೇಶನದ ಶೂನ್ಯ ವೇಳೆಯಲ್ಲಿ ರಾಜ್ಯ ಸಭಾ ಸದಸ್ಯರು ಶ್ರಿ ಕ್ಷೇತ್ರ ಧರ್ಮಸ್ಥಳದ ದರ್ಮಾದಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ವಿಚಾರ ಪ್ರಸ್ತಾಪಿಸಲಿದ್ದಾರೆ.

Advertisement

ಬೆಲೆ ಏರಿಳಿತದ ಮಧ್ಯೆ ಸೂಕ್ತ ಮಾರುಕಟ್ಟೆ ಕೊರತೆ ಎದುರಿಸುತ್ತಿರುವ ಬೆಳೆಗಾರರು ಇದೀಗ ಎಲೆಚುಕ್ಕಿ ರೋಗದಿಂದ ತತ್ತರಿಸಿದ್ದಾರೆ. ಭವಿಷ್ಯದಲ್ಲಿ ಬೆಳೆಗಾರರ ಪ್ರೋತ್ಸಾಹಕ್ಕೆ ಬೇಕಾದ ವಿಚಾರವನ್ನು

ಜನಸಾಮಾನ್ಯರ ಹಿತಾಸಕ್ತಿಯ ಪ್ರಾಮುಖ್ಯತೆ ಆಧಾರದ ಮೇಲೆ ಸಂಸತ್ತಿನಲ್ಲಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆ ಅವಧಿಯಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟದ ಕುರಿತು ಅವರು ಮಾತನಾಡಲಿದ್ದಾರೆ ಎಂದು ರಾಜ್ಯ ಸಭಾ ಆಪ್ತ ಕಾರ್ಯದರ್ಶಿ ಕೆ ಎನ್ ಜನಾರ್ದನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಂಸದ್ ಟಿವಿ ರಾಜ್ಯಸಭಾದಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next