Advertisement

Subramanya ಪ್ರವಾಸಿ ಮಕ್ಕಳ ತಂಡಕ್ಕೆ ಮನೆಯಲ್ಲೇ ಊಟ, ವಸತಿ ಕಲ್ಪಿಸಿದ ಡಾ| ರವಿ ಕಕ್ಕೆಪದವು

11:38 PM Dec 20, 2023 | Team Udayavani |

ಸುಬ್ರಹ್ಮಣ್ಯ: ತಡರಾತ್ರಿ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಹಾವೇರಿ ಮೂಲದ ಹಳ್ಳಿಯೊಂದರ ಶಾಲೆಯ ಮಕ್ಕಳ ಪ್ರವಾಸ ತಂಡಕ್ಕೆ ಡಾ| ರವಿ ಕಕ್ಕೆಪದವು ಟ್ರಸ್ಟ್‌ ಊಟ, ವಸತಿ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಪ್ರಸಂಗ ಮಂಗಳವಾರ ನಡೆದಿದೆ.

Advertisement

ಪ್ರವಾಸ ತಂಡವು ರಾತ್ರಿ ಸುಬ್ರಹ್ಮಣ್ಯಕ್ಕೆ ತಲುಪುವಾಗ ತಡವಾದ ಕಾರಣ ಭೋಜನ ವ್ಯವಸ್ಥೆ ಹಾಗೂ ಹೊಟೇಲ್‌ಗ‌ಳನ್ನು ಮುಚ್ಚಲಾಗಿತ್ತು. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ| ರವಿ ಕಕ್ಕೆಪದವು ಅವರು ಹಸಿವಿನಿಂದ ಕಂಗಾಲಾದ ಮಕ್ಕಳನ್ನು ಗಮನಿಸಿ ಅವರ ಜತೆ ಮಾತಾಡಿ ತನ್ನ ಮನೆಗೆ ಕರೆದುಕೊಂಡು ಹೋಗಿ ಸುಮಾರು 65 ಮಕ್ಕಳು ಮತ್ತು ಶಿಕ್ಷಕರು ಹಾಗೂ ಬಸ್‌ ಸಿಬಂದಿಗೆ ವ್ಯವಸ್ಥೆ ಕಲ್ಪಿಸಿದರು.

ರವಿ ಕಕ್ಕೆಪದವು ಅವರ ಪತ್ನಿ ಗೀತಾ ಅವರು ಊಟದ ವ್ಯವಸ್ಥೆ ಮಾಡಿದರು. ಹಾಗೂ ತಮ್ಮ ಮನೆಯಲ್ಲಿಯೇ ಮಲಗಲು ವ್ಯವಸ್ಥೆಯನ್ನು ಮಾಡಿದರು. ಟ್ರಸ್ಟ್‌ನ ಕೋಶಾಧಿಕಾರಿ ಮಣಿಕಂಠ, ಸದಸ್ಯರಾದ ವಸಂತ್‌, ಕಾರ್ತಿಕ್‌ ಸಹಕರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next