Advertisement

ಡಾ|ಮುಖರ್ಜಿ ಜನ್ಮ ದಿನಾಚರಣೆ

09:57 AM Jul 08, 2020 | Suhan S |

ಬಸವಕಲ್ಯಾಣ: ಬಿಜೆಪಿ ಗ್ರಾಮೀಣ ಘಟಕದ ವತಿಯಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಡಾ|ಶಾಮ ಪ್ರಸಾದ ಮುಖರ್ಜಿ ಅವರ 120ನೇ ಜನ್ಮದಿನ ಆಚರಿಸಲಾಯಿತು.

Advertisement

ತಾಲೂಕು ಅಧ್ಯಕ್ಷ ಅಶೋಕ ವಕಾರೆ ಹಾಗೂ ಪ್ರದಾನ ಕಾರ್ಯದರ್ಶಿ ಹಣಮಂತ ಧನಶೆಟ್ಟೆ ಮುಖರ್ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಜನ್ಮದಿನದ ನಿಮಿತ್ತ ನಗರದ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿದರು.

ರವಿ ಚಂದನಕೇರೆ, ಅನೀಲ ಭೂಸಾರೆ, ವಿಜಯಕುಮಾರ ಮಂಠಾಳೆ, ದೀಪಕ ಗಾಯಕವಾಡ, ಅರವಿಂದ ಮುತ್ಯೆ, ಶರಣು ಸಲಗರ, ಜಿಪಂ ಸದಸ್ಯರಾದ ಸುಧೀರ ಕಾಡಾದಿ, ಕಾರ್ಯದರ್ಶಿ ಮಹಾಂತಯ್ಯಸ್ವಾಮಿ, ಕೋಶಾಧ್ಯಕ್ಷ ದೇವಿಂದ್ರ ಭೋಪಳೆ, ರತಿಕಾಂತ ಕೋಹಿನೂರ, ಪ್ರದೀಪ ಗಡವಂತೆ, ಸಿದ್ದು ಬಿರಾದಾರ, ಚಂದ್ರಕಾಂತ ಉಳಾಗಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next