Advertisement

ಡಾ|ಜಗಜೀವನರಾಮ ಮೂರ್ತಿ ಅನಾವರಣ

12:57 PM Mar 12, 2018 | |

ಶಹಾಬಾದ: ನಗರಸಭೆ ಆವರಣದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ|ಬಾಬುಜಗಜೀವನರಾಮ ಪ್ರತಿಮೆ ಅನಾವರಣ  ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ, ಸಾಮಾಜಿಕ ನ್ಯಾಯಕ್ಕಾಗಿ ತಮ್ಮ
ಜೀವನವನ್ನೇ ಮುಡುಪಾಗಿಟ್ಟ ಮಹಾನ್‌ ವ್ಯಕ್ತಿ ಡಾ| ಬಾಬು ಜಗಜೀವನರಾಮ ರೇಲ್ವೆ, ರಕ್ಷಣೆ, ಕಾರ್ಮಿಕ, ಕೃಷಿ ಖಾತೆ ಸಚಿವರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಹಸಿರು ಕ್ರಾಂತಿ ಮಾಡುವ ಮೂಲಕ ಆಹಾರ ಭದ್ರತೆ ಕಾಪಾಡಿದ ಮಹಾನ ವ್ಯಕ್ತಿ. ರೇಲ್ವೆ ಮಂತ್ರಿಯಾಗಿದ್ದಾಗ
ರೇಲ್ವೆಯಲ್ಲಿ ಮೀಸಲಾತಿ ಹಾಗೂ ರೇಲ್ವೆ ಇಲಾಖೆಯಲ್ಲಿ ಬ್ಯಾಕ್‌ಲಾಗ್‌ ಹುದ್ದೆ ತುಂಬಿದವರಲ್ಲಿ ಮೊಟ್ಟ ಮೊದಲಿಗರು ಎಂದು ಹೇಳಿದರು. 

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶರಣಪ್ರಕಾಶ ಪಾಟೀಲ, ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಎಂ. ಖರ್ಗೆ, ವಿಧಾನ ಪರಿಷತ್‌ ಸದಸ್ಯರಾದ ಕೆ.ಬಿ. ಶಾಣಪ್ಪ, ಇಕ್ಬಾಲ್‌ ಅಹ್ಮದ್‌ ಸರಡಗಿ, ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕುಸಾಳೆ, ಸ್ಥಾಯಿ ಸಮಿತಿ ಅಧ್ಯಕ್ಷ ಡಾ| ಅಹ್ಮದ್‌ ಪಟೇಲ್‌, ನಗರಸಭೆ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next