Advertisement

Haladi ಡಾ| ಎಚ್‌.ಎಸ್‌ ಶೆಟ್ಟಿ ಹುಟ್ಟೂರು ಸಮ್ಮಾನ

12:48 AM Sep 17, 2023 | Team Udayavani |

ಸಿದ್ದಾಪುರ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ನಿಲಯದ 23ನೇ ಘಟಿಕೋತ್ಸವದಲ್ಲಿ ಡಾಕ್ಟರ್‌ ಆಫ್‌ ಸೈನ್ಸ್‌ ಗೌರವಕ್ಕೆ ಭಾಜನರಾದ ಹಾಲಾಡಿ ಕುದ್ರುಮನೆ ಡಾ| ಶ್ರೀನಿವಾಸ ಶೆಟ್ಟಿ (ಡಾ| ಎಚ್‌.ಎಸ್‌. ಶೆಟ್ಟಿ) ಅವರಿಗೆ ಸೆ. 22ರಂದು ಬೆಳಗ್ಗೆ 11ಕ್ಕೆ ಹುಟ್ಟೂರ ಸಮ್ಮಾನ ಹಾಲಾಡಿ ಶಾಲಿನಿ ಜಿ. ಶಂಕರ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಜರಗಲಿದೆ.

Advertisement

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಶ್ರೀನಿವಾಸ ಶೆಟ್ಟಿ ಅವರನ್ನು ಸಮ್ಮಾನಿಸಲಿದ್ದಾರೆ. ವೇ|ಮೂ| ತಟ್ಟುವಟ್ಟು ವಾಸು ದೇವ ಜೋಯಿಸ ಹಾಲಾಡಿ ಶುಭಾಶಂಶ ಸನೆಗೈಯಲಿದ್ದಾರೆ.

ಹರಿಪ್ರಕಾಶ್‌ ಕೋಣಿಮನೆ ಪ್ರಸ್ತಾ ವನೆಗೈಯಲಿದ್ದಾರೆ. ಶಾಸಕ ಕಿರಣ್‌ ಕುಮಾರ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಹಾಲಾಡಿ ಗ್ರಾ.ಪಂ. ಅಧ್ಯಕ್ಷ ಅಶೋಕ ಶೆಟ್ಟಿ ಚೋರಾಡಿ ಭಾಗವಹಿಸಲಿದ್ದಾರೆ.

ಡಾ| ಶ್ರೀನಿವಾಸ ಶೆಟ್ಟಿ ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್‌ ಸೊಸೈಟಿ ಸಂಸ್ಥಾಪಕರಾಗಿ ಮತ್ತು ವಿವಿದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next