Advertisement

Election ಪ್ರಚಾರದ ವೇಳೆ ಡಾ.ಜಿ.ಪರಮೇಶ್ವರ್ ಅವರ ತಲೆಗೆ ಕಲ್ಲು ‌ಬಿದ್ದು ಗಾಯ

08:25 PM Apr 28, 2023 | Team Udayavani |

ಕೊರಟಗೆರೆ:ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಜೆಸಿಬಿಯಿಂದ ಕಾರ್ಯಕರ್ತರು ಪುಷ್ಪ ವೃಷ್ಟಿ ಮಾಡುವಾಗ ತಲೆಗೆ ಆಕಸ್ಮಿಕ ವಾಗಿ ತಲೆಗೆ ಕಲ್ಲು ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Advertisement

ಉದಯವಾಣಿ ಪತ್ರಿಕೆಗೆ ಕೊರಟಗೆರೆ ವೃತ್ತ‌ ನಿರೀಕ್ಷಕರಾದ ಸುರೇಶ್.ಕೆ ಮಾತನಾಡಿ ಬೈರೇನಹಳ್ಳಿ ಕ್ರಾಸ್ ಬಳಿ ಚುನಾವಣ ಪ್ರಚಾರದ ವೇಳೆ ಆಭಿಮಾನಿಗಳು ಅವರನ್ನು ಎತ್ತಿ‌ ಕುಣಿಸುವಾಗ ಜೆಸಿಬಿಯಿಂದ ಹೂವಿನ ಮಳೆ ಸುರಿಸುವಾಗ ಆಕಸ್ಮಿಕವಾಗಿ ತಲೆಗೆ ಕಲ್ಲು ಬಿದ್ದು ಗಾಯಗೊಂಡಿದ್ದು ರಕ್ತಸ್ರಾವ ವಾಗಿದೆ. ಕೂಡಲೇ ಸಮೀಪದ ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಚುನಾವಣ ಪ್ರಚಾರವನ್ನು ಅರ್ಧಕ್ಕೆ‌ ಮೊಟಕುಗೊಳಿಸಿ ತುಮಕೂರಿನ ಅಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next