Advertisement

BJPಯಿಂದ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ವಿಚಾರ: ಎಚ್.ಸಿ.ಬಾಲಕೃಷ್ಣ ವ್ಯಂಗ್ಯ

05:34 PM Feb 29, 2024 | Team Udayavani |

ರಾಮನಗರ: ಪಾಪ ಕುಮಾರಣ್ಣ ಇಲ್ಲಿ ನಿಲ್ಲೋಕೆ ಹೆದರುತ್ತಿದ್ದಾರೆ, ಮಂಡ್ಯಕ್ಕೆ ಓಡೋಗ್ತಾವ್ರೆ.!ಸಿ.ಪಿ.ಯೋಗೇಶ್ವರ್ ನಿಂತುಕೊಳ್ಳೊಕೆ ಹೆದರುತ್ತಿದ್ದಾರೆ.ಅವರು ಇವರನ್ನ, ಇವರು ಅವರನ್ನ ಮುಂದಕ್ಕೆ ತಳ್ತಾವ್ರೆ.! ಪಾಪ ಈಗ ಆ ಡಾಕ್ಟ್ರನ್ನ ನಿಲ್ಸೋಕೆ ಮುಂದಾಗಿದ್ದಾರೆ” ಎಂದು ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಗುರುವಾರ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ‘ಅ ಡಾಕ್ಟ್ರು ಯಾರು? ದೇವೇಗೌಡರ ಅಳಿಯ, ಕುಮಾರಣ್ಣನ ಬಾವ.ಅವರನ್ನ ಬಿಜೆಪಿಯಿಂದ ನಿಲಿಸಲು ಹೊರಟ್ಟಿದ್ದಾರೆ.ಜೆಡಿಎಸ್ ಪಕ್ಷದಲ್ಲೇ ನಿಲ್ಲಿಸಿ ಗೆಲ್ಲಿಸಲು ಆಗುವುದಿಲ್ಲವೇ? ಕುಮಾರಸ್ವಾಮಿಗೆ ನಾಚಿಕೆ ಆಗಬೇಕು” ಎಂದು ಲೇವಡಿ ಮಾಡಿದರು.

”ಡಾಕ್ಟರ್ ಆಗಿ ಆಪರೇಷನ್ ಮಾಡಿದ ಹಾಗಲ್ಲ ರಾಜಕಾರಣ. ಯಾರು ಯಾವುದನ್ನ ಮಾಡಬೇಕು ಅದನ್ನೇ ಮಾಡಬೇಕು.ಎಲ್ಲರೂ ರಾಜಕಾರಣದಲ್ಲಿ ಸಕ್ಸಸ್ ಆಗಲಿಕ್ಕೆ ಆಗಲ್ಲ” ಎಂದು ಲೇವಡಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next