Advertisement

ಡಾ.ಭುಜಂಗ ಶೆಟ್ಟಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

12:41 AM Apr 21, 2019 | Lakshmi GovindaRaju |

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಬೋಧನೆ ಮೂಲಕ ಉತ್ತಮ ಸೇವೆ ಸಲ್ಲಿಸಿದ ಡಾ.ಭುಜಂಗ ಶೆಟ್ಟಿ ಸೇರಿದಂತೆ ಅನೇಕರಿಗೆ ರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಗಳ ಮಂಡಳಿಯ ಒಕ್ಕೂಟ ಹಾಗೂ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎಬಿಇ)ಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ನಗರದ ಭಗವಾನ್‌ ಮಹಾವೀರ ಜೈನ್‌ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ಡಾ ಭುಜಂಗ ಶೆಟ್ಟಿ, ಡಾ. ಕಾಮಿನಿ ರಾವ್‌ ಮತ್ತು ಡಾ. ವೆಂಕಟೇಶ ಕೃಷ್ಣಮೂರ್ತಿ ಸೇರಿದಂತೆ 40 ವೈದ್ಯರಿಗೆ ಎನ್‌ಬಿಇ ಪ್ರಶಸ್ತಿ ನೀಡಿ ಸನ್ಮಾನಿಸಿತು. ಎಬಿಇ ಅಧ್ಯಕ್ಷ ಡಾ.ಅಭಿಜತ್‌ ಶೇಠ್ ಪ್ರದಾನ ಮಾಡಿದರು.

ಎಎನ್‌ಬಿಎಐ ಕರ್ನಾಟಕ ಅಧ್ಯಕ್ಷ ಡಾ.ವೆಂಕಟೇಶ್‌ ಕೃಷ್ಣಮೂರ್ತಿ, ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಕಾರ್ಯನಿರ್ವಹಾಕ ನಿರ್ದೇಶಕ ಡಾ.ರಶ್ಮಿಕಾಂತ್‌ ದವೆ, ಡಾ.ಅಲೆಕ್ಸಾಂಡರ್‌ ಥಾಮಸ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next