Advertisement

ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ: ತನಿಖೆ ನಡೆಸುವಂತೆ ಕಾಗೇರಿಗೆ ಮನವಿ‌

03:51 PM Apr 02, 2022 | Team Udayavani |

ಶಿರಸಿ: ಆಸ್ಪತ್ರೆಯಲ್ಲಿ ರೋಗಿಯ ಸಾವಿಗೆ ಕಿರುಕುಳ ಮತ್ತು ಕೊಲೆ ಆರೋಪದ ನಂತರ ರಾಜಸ್ಥಾನದ ದೌಸಾದ ಡಾ ಅರ್ಚನಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು ಆಗ್ರಹಿಸುವಂತೆ ಇಲ್ಲಿನ ಐಎಂಎ ಘಟಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ‌ ಸಲ್ಲಿಸಿದೆ.

Advertisement

ನವದೆಹಲಿ ಭಾರತೀಯ ವೈದ್ಯಕೀಯ ಸಂಘದ ಸೂಚನೆಗಳ ಪ್ರಕಾರ ಶನಿವಾರ ಐಎಂಎ ಯಿಂದ ಪ್ರತಿಭಟನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದೂ ಸ್ಪೀಕರ್ ಅವರ ಗಮನಕ್ಕೆ ತರಲಾಯಿತು.

ಈ ವೇಳೆ ಡಾ. ವಿನಾಯಕ‌ ಕಣ್ಣಿ, ಡಾ. ರಾಮಾ ಹೆಗಡೆ, ಡಾ. ದಿನೇಶ ಹೆಗಡ, ಡಾ. ಶಿವರಾಮ ಕೆವಿ ಸೇರಿದಂತೆ ಇತರರು ಇದ್ದರು.

ನಡೆದಿದ್ದೇನು?

ರಾಜಸ್ಥಾನದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದ ನಂತರ ವೈದ್ಯರಿಗೆ ಕಿರುಕುಳ ನೀಡಲು ಗುಂಪನ್ನು ಪ್ರಚೋದಿಸಿದ್ದಕ್ಕಾಗಿ ರಾಜಸ್ಥಾನದ ಸ್ಥಳೀಯ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ.

Advertisement

ಕೊಲೆ ಆರೋಪ ಹೊತ್ತಿದ್ದ ವೈದ್ಯೆ ಅರ್ಚನಾ ಶರ್ಮಾ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಮನನೊಂದು ಡೆತ್‍ನೋಟ್ ಬರೆದು ತಾನು ನಿರಪರಾಧಿ ಎಂದು ಹೇಳಿದ್ದಾರೆ. ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಆತ್ಮಹತ್ಯೆಯ ನಂತರ, ಮುಖ್ಯಮಂತ್ರಿಗಳು ಆ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next