Advertisement

ಖ್ಯಾತ ಆಯುರ್ವೇದ ವೈದ್ಯ ಡಾ. ಪಿ.ಕೆ. ವಾರಿಯೆರ್ ಇನ್ನಿಲ್ಲ

03:08 PM Jul 11, 2021 | Girisha |

ತಮ್ಮ ಆಯುರ್ವೇದ ಚಿಕಿತ್ಸೆಯಿಂದ ದೇಶದಾದ್ಯಂತ ಅದೆಷ್ಟೋ ಜನರನ್ನು ಕಾಪಾಡಿದ್ದ, ಕೇರಳದ ಕೊಟ್ಟಕ್ಕಲ್ ಆಯುರ್ವೇದ ವೈದ್ಯ ಶಾಲಾದ ಟ್ರಸ್ಟಿ ಶತಾಯುಷಿ ಡಾ. ಪಿ.ಕೆ. ವಾರಿಯೆರ್ ಸಾವನ್ನಪ್ಪಿದ್ದಾರೆ.

Advertisement

ವಾರಿಯೆರ್ ಅವರು ಮಾಜಿ ರಾಷ್ಟ್ರಪತಿಗಳು ಮತ್ತು ಮಾಜಿ ಪ್ರಧಾನಿಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಇವರು ಸಾವಿಗೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ.

ವಾರಿಯೆರ್ ಸ್ವಾತಂತ್ರ್ಯ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೆಲ ಕಾಲದ ನಂತರ ರಾಜಕಾರಣದಿಂದ ದೂರ ಉಳಿದು  ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾಗೆ ಸೇರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next