Advertisement

ವರ್ಷಾಂತ್ಯಕ್ಕೆ ಜಿಡಿಪಿ ಶೇ.5 ತಲುಪಿದರೆ ಅದೇ ನಮ್ಮ ಪುಣ್ಯ: ಪಿ.ಚಿದಂಬರಂ ವ್ಯಂಗ್ಯ

10:02 AM Dec 06, 2019 | Team Udayavani |

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಹಾಗೂ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಒಂದು ತಿಂಗಳ ಸೆರೆವಾಸ ಕಂಡು ಬೇಲ್‌ ಮೂಲಕ ಹೊರ ಬಂದಿರುವ ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮೋದಿ ಸರಕಾರ ವಿರುದ್ಧ ಟೀಕೆ ಪ್ರಹಾರ ನಡೆಸಿದ್ದು, ಆರ್ಥಿಕ ಹಿಂಜರಿತಕ್ಕೆ ಕೇಂದ್ರ ಸರಕಾರ ಈಗಿನ ನೀತಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ಬುಧವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಪಿ.ಚಿದಂಬರಂ ಜೈಲಿನಿಂದ ಹೊರ ಬಂದ ನಂತರ ಮೊದಲ ಬಾರಿಗೆ ಗುರುವಾರ ಸುದ್ದಿಗೋಷ್ಠಿ ನಡೆಸಿದ್ದು, ದೇಶದ ಆರ್ಥಿಕತೆ ಕುಸಿತ ಕುರಿತು ಮಾತನಾಡಿದ್ದಾರೆ. ಮೋದಿ ಮೌನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಅಂತ್ಯಕ್ಕೆ ಜಿಡಿಪಿ ಶೇ.5 ರಷ್ಟು ಮುಟ್ಟಿದರೆ ಅದು ನಮ್ಮ ಅದೃಷ್ಟ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿರುವ ಕೆಟ್ಟ ನಿರ್ಧಾರಗಳಿಂದ ದೇಶದ ಜಿಡಿಪಿ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ. ಪರಿಸ್ಥಿತಿ ಮೀರಿ ಹೋಗುತ್ತಿದ್ದರೂ ದೇಶದ ಆರ್ಥಿಕತೆ ಬಗ್ಗೆ ಕೇವಲ ವಿತ್ತ ಸಚಿವರೇ ಮಾತನಾಡುತ್ತಿದ್ದಾರೆ. ಜಿಡಿಪಿ ಕುಸಿತದ ಕುರಿತು ಪ್ರಧಾನಿ ಮೋದಿ ಅವರು ಮೌನವಹಿಸಿದ್ದಾರೆ ಎಂದು ಟೀಕೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next