Advertisement

ದೋಟಿಹಾಳ : ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಿ ಮನೆಗೆ ಬಂದಿದ್ದ ರೈತ ಸಾವು…ಕಾರಣ ನಿಗೂಢ

01:38 PM Aug 30, 2022 | Team Udayavani |

ದೋಟಿಹಾಳ: ಸಮೀಪದ ಕಲಕೇರಿ ಗ್ರಾಮದ ರೈತ ಸೋಮವಾರ ತನ್ನ ಹತ್ತಿ ಪ್ಲಾಟಿಗೆ ಕ್ರಿಮಿನಾಶಕ ಸಿಂಪಡಿಸಿ ಸಂಜೆ ಮನೆಗೆ ಹಿಂತಿರುಗಿದ ರೈತ, ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥಗೊಂಡು ಸಾವಿಗೀಡಾದ ಘಟನೆ ಕುಷ್ಟಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.

Advertisement

ರೈತ ನಾಗಪ್ಪ ತಂದಿ ಯಂಕಪ್ಪ ತೋಪಲಕಟ್ಟಿ (46) ಸಾವಿಗೀಡಾದ ದರ್ದೈವಿ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಘಟನೆ ವಿವರ : ಗುಡಿಕಲಕೇರಿ ಸೀಮಾ ವ್ಯಾಪ್ತಿಯ ಹೊಲವೊಂದಕ್ಕೆ ಸೋಮವಾರ ದಿನ ಮಧ್ಯಾಹ್ನ ವೇಳೆ ದಂಪತಿಗಳಿಬ್ಬರು ತೆರಳಿ ಹತ್ತಿ ಪ್ಲಾಟಿಗೆ ಫೋಸಕಿಲ್ ಎಂಬ ಹೆಸರಿನ ಕ್ರಿಮಿನಾಷಕ ಸಿಂಪಡಿಸಿದ್ದಾರೆ. ಸಂಜೆ ಮನೆಗೆ ಹಿಂತಿರುಗಿದ ಬಳಿಕ ಪತಿ, ಪತ್ನಿ ಮತ್ತು ತಮ್ಮ ಪುತ್ರಿ ಸೇರಿ ಒಟ್ಟಿಗೆ ಊಟ ಮಾಡಿದ್ದಾರೆ. ಬಳಿಕ ನಾಗಪ್ಪ ಅವರು ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಅಸ್ವಸ್ಥನಾಗಿದ್ದಾನೆ. ಆತನನ್ನು ದೋಟಿಹಾಳ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಖಾಸಗಿ ವಾಹನದ ಮೂಲಕ ಹೋಗುವ ವೇಳೆ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಮೃತನ ಪತ್ನಿ ದೇವಮ್ಮ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅಬಕಾರಿ ನೀತಿ ಹಗರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಖಚಿತ; ಪ್ರಹ್ಲಾದ್ ಜೋಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next